Advertisement

ಉಕ್ಕಿನ ಸೇತುವೆ ಕೈಬಿಡಿ

06:40 AM Jan 11, 2019 | |

ಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆ ಕೈಬಿಡುವಂತೆ ಬೆಂಗಳೂರು ಎನ್ವಿರಾನ್ಮೆಂಟಲ್‌ ಟ್ರಸ್ಟ್‌ ಸಿಎಂ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದೆ.

Advertisement

ಉಕ್ಕಿನ ನಿರ್ಮಿಸಿದರೆ ಆಗುವ ಪರಿಣಾಮಗಳ ಕುರಿತು ಮುಖ್ಯಮಂತ್ರಿಗೆ ವಿವರವಾದ ಪತ್ರ ಬರೆದಿರುವ ಟ್ರಸ್ಟ್‌ ಅಧ್ಯಕ್ಷ ಹಾಗೂ ಪರಿಸರವಾದಿ ಎ.ಎನ್‌.ಯಲ್ಲಪ್ಪ ರೆಡ್ಡಿ, ಉಕ್ಕಿನ ಸೇತುವೆ ನಿರ್ಮಾಣದಿಂದ ನಗರದಲ್ಲಿ ಮಾಲಿನ್ಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಜತೆಗೆ ಪರಿಸರದ ಮೇಲೂ ದುಷ್ಪರಿಣಾಮ ಬೀರಲಿದೆ. ಉಕ್ಕು ಹೆಚ್ಚಿನ ಉಷ್ಣಾಂಶ ಉತ್ಪತ್ತಿ ಮಾಡಲಿದ್ದು, ಮರಗಳ ಸುಸ್ಥಿರ ಬೆಳವಣಿಗೆಗೆ ತೊಡಕಾಗಲಿದೆ.

ಈಗಾಗಲೇ ನಗರದಲ್ಲಿ ಸಂಚರಿಸುತ್ತಿರುವ ಲಕ್ಷಾಂತರ ವಾಹನಗಳ ಸಂಚಾರ ಹಾಗೂ ಕೈಗಾರಿಕೆಗಳಿಂದ ಟನ್‌ಗಟ್ಟಲೇ ವಿಷಾನಿಲ (ಟಾಕ್ಸಿಕ್‌ ಗ್ಯಾಸ್‌) ಉತ್ಪತ್ತಿಯಾಗುತ್ತಿದೆ. ಇದರ ನಡುವೆಯೇ ಉಕ್ಕಿನ ಸೇತುವೆ ನಿರ್ಮಿಸಿದರೆ ಮಾಲಿನ್ಯ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎಂದು ಎಚ್ಚರಿಸಿದ್ದು, ಕೂಡಲೇ ಯೋಜನೆ ಕೈಬಿಡುವಂತೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next