Advertisement

1.15 ಲಕ್ಷ ಕೋಟಿ ಕೊಡದಿದ್ದರೆ ಅಧಿಕಾರ ಬಿಡಿ: ಮಮತಾ ಬ್ಯಾನರ್ಜಿ

11:52 PM Dec 10, 2023 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲಕ್ಕೆ ಕೇಂದ್ರಸರಕಾರ 1.15 ಲಕ್ಷ ಕೋಟಿ ರೂ.ಗಳನ್ನು ನೀಡಬೇಕಾಗಿದೆ. ರಾಜ್ಯಕ್ಕೆ ಬರಬೇಕಿರುವ ಹಣವನ್ನು ನೀಡಬೇಕು ಇಲ್ಲವೇ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಪಶ್ಚಿಮ ಬಂಗಾಲದ ಅಲಿಪುರದೌರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಹಣದ ಕುರಿತು ಇತ್ಯರ್ಥ ಆಗಲೇಬೇಕಿದೆ.

Advertisement

ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸುವುದಕ್ಕೂ ನಾನು ಅನುಮತಿ ಕೇಳಿದ್ದೇನೆ. ಶೀಘ್ರವೇ ಕೆಲವು ಸಂಸದರೊಂದಿಗೆ ದಿಲ್ಲಿಗೆ ತೆರಳಲಿದ್ದೇನೆ. ಕೇಂದ್ರವು ರಾಜ್ಯಕ್ಕೆ 1.15 ಲಕ್ಷ ಕೋಟಿ ರೂ ನೀಡಬೇಕು ಇಲ್ಲವೋ ಅಧಿಕಾರದಿಂದ ಕೆಳಗಿಳಿಯಬೇಕು. ಇದು ಜನರ ಘೋಷಣೆ ನಾವು ಇದನ್ನೇ ಆಗ್ರಹಿಸುತ್ತೀವಿ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next