Advertisement

ಪಾಕ್ ಬಿಟ್ಟು ತೊಲಗಿ, ಭಾರತದಲ್ಲೇ ನೆಲೆಸಿ: ಇಮ್ರಾನ್ ವಿರುದ್ಧ ನವಾಜ್ ಷರೀಫ್ ಪುತ್ರಿ ಕಿಡಿ

11:12 AM Apr 09, 2022 | Team Udayavani |

ಇಸ್ಲಾಮಾಬಾದ್: ಭಾರತದ ವಿರುದ್ಧ ತೆಗಳುತ್ತಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ದಿಢೀರನೆ ಭಾರತವನ್ನು ಹೊಗಳಿದ್ದಕ್ಕೆ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರ್ಯಾಮ್ ನವಾಜ್ ಷರೀಫ್ ವಾಗ್ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಮುಂಜಾಗ್ರತೆ ವಹಿಸಿ…ಐದು ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ; ಕೇಂದ್ರದ ಎಚ್ಚರಿಕೆ

“ ಒಂದು ವೇಳೆ ಭಾರತ ತುಂಬಾ ಇಷ್ಟವಾದರೆ ಇಮ್ರಾನ್ ಖಾನ್ ಪಾಕಿಸ್ತಾನ ತೊರೆದು ಭಾರತಕ್ಕೆ ಹೋಗಿ ನೆಲೆಸಲಿ” ಎಂದು ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್ (ಪಿಎಂಎಲ್ ಎನ್) ಪಕ್ಷದ ಉಪಾಧ್ಯಕ್ಷೆ ಮರ್ಯಾಮ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.

ತನ್ನ ಅಧಿಕಾರ ಕೈತಪ್ಪಿ ಹೋಗುತ್ತಿದೆ ಎಂದು ಹುಚ್ಚೆದ್ದು ಕುಣಿಯುತ್ತಿರುವ ಈ ವ್ಯಕ್ತಿಯನ್ನು ಅವರದ್ದೇ ಸ್ವಂತ ಪಕ್ಷ ಅವರನ್ನು ಉಚ್ಛಾಟಿಸಿರುವುದಾಗಿ ಯಾರಾದರು ತಿಳಿಸಲಿ. ಒಂದು ವೇಳೆ ಭಾರತ ತುಂಬಾ ಇಷ್ಟವಾದರೆ, ಪಾಕ್ ಬಿಟ್ಟು ಭಾರತಕ್ಕೆ ಸ್ಥಳಾಂತರಗೊಳ್ಳಲಿ ಎಂದು ಮರ್ಯಾಮ್ ತಿಳಿಸಿದ್ದಾರೆ.

ಅಧಿಕಾರಕ್ಕಾಗಿ ಈ ಪರಿಯಲ್ಲಿ ಅಂಗಲಾಚುತ್ತಿರುವವರನ್ನು ನಾನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ ಎಂದು ಮರ್ಯಾಮ್ ಪಾಕ್ ಸಂಸತ್ ನಲ್ಲಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮುನ್ನ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next