Advertisement

ಗುತ್ತಿಗಾರು: ರಿಕ್ಷಾ ಸಿಡಿಲಿಗಾಹುತಿ

03:37 PM May 28, 2017 | Team Udayavani |

ಸುಳ್ಯ: ಸುಳ್ಯ ತಾಲೂಕಿನಲ್ಲಿ ಶನಿವಾರ ಮುಂಜಾನೆ ಗುಡುಗು ಸಿಡಿಲಿನ ಸಹಿತ ಭಾರೀ ಮಳೆಯಾಗಿದೆ. ಗುತ್ತಿಗಾರು ಗ್ರಾಮದ ಪೈಕದಲ್ಲಿ ಸಿಡಿಲಿಗೆ ಹೈಟೆನ್ಶನ್‌ ತಂತಿಯೊಂದು ಕಡಿದು ಬಿದ್ದು ರಬ್ಬರ್‌ ತೋಟದ ಸಮೀಪ ನಿಲ್ಲಿಸಿದ್ದ ರವೀಶ್‌ ಅವರ ರಿಕ್ಷಾದ ಮೇಲೆ ಬಿದ್ದಿದೆ. ರಿಕ್ಷಾ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ತಾಲೂಕಿನಾದ್ಯಂತ ಚರಂಡಿಗಳು ದುರಸ್ತಿಯಾಗದ ಪರಿಣಾಮ ಕಸ ಶೇಖರಣೆಗೊಂಡು ರಸ್ತೆಯ ಮೇಲೆಯೇ ಕೆಸರು ನೀರು ಹರಿದು ಸಂಚಾರಕ್ಕೆ ತೊಡಕಾಯಿತು. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next