Advertisement

ನನ್ನ ಮೇಲೆ ದ್ವೇಷವೇ, ನಿಗಮದ ಮೇಲೆ ದ್ವೇಷವೇ? ಯಾರ ಮೇಲಿನ ದ್ವೇಷಕ್ಕೆ ಈ ಮುಷ್ಕರ?: ಸವದಿ

04:07 PM Mar 21, 2021 | Team Udayavani |

ಚಿತ್ರದುರ್ಗ: ನಿಮಗೆ ನನ್ನ ಮೇಲೆ ವೈಯಕ್ತಿಕ ದ್ವೇಷವೇ, ನಿಗಮದ ಮೇಲೆ ದ್ವೇಷವೇ? ಅಥವಾ ರಾಜ್ಯ ಸರ್ಕಾರದ ಮೇಲಿನ ದ್ವೇಷಕ್ಕೆ ಪ್ರತಿಭಟನೆ ನಡೆಸುತ್ತಿದ್ದೀರೋ? ಮತ್ತೆ ಮುಷ್ಕರ ನಡೆಸುವ ಬಗ್ಗೆ ನೋಟಿಸ್ ನೀಡಿದ್ದು ಯಕ್ಷ ಪ್ರಶ್ನೆಯಾಗಿದೆ ಎಂದು ಸಾರಿಗೆ  ನೌಕರರ ಮುಷ್ಕರದ ಬಗ್ಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

Advertisement

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಬಸಾಪುರ ಗ್ರಾಮದಲ್ಲಿ ಚಾಲಕರ ತರಬೇತಿ ಕೇಂದ್ರ ಉದ್ಘಾಟಿಸಿದ ಅವರು ಮಾತನಾಡಿದರು.

ಎಪ್ರಿಲ್ 7ರಿಂದ ಸಾರಿಗೆ ನೌಕರರಿಂದ ಮತ್ತೆ ಮುಷ್ಕರ ವಿಚಾರವಾಗಿ ಮಾತನಾಡಿದ ಅವರು, ಸಾರಿಗೆ ನೌಕರರು ಮತ್ತೆ ಹೋರಾಟಕ್ಕೆ ಮುಂದಾಗಿದ್ದು ಯಾಕೆಂದು ನನ್ನ ಪ್ರಶ್ನೆ? 9 ಬೇಡಿಕೆ ಈಡೇರಿಸಲು ಒಪ್ಪಿಕೊಂಡು ಅದರಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಉಳಿದ ಒಂದು ಬೇಡಿಕೆ ಕೆಲವೇ ದಿನಗಳಲ್ಲಿ ಈಡೇರಿಸುತ್ತೇವೆ ಎಂದರು.

ಇದನ್ನೂ ಓದಿ:ಹಣ ನುಂಗುತ್ತಿರುವ ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ವ್ಯವಸ್ಥೆಯನ್ನು ಮೋದಿ ಕೊನೆಗಾಣಿಸಲಿ: HDK

ಸಾರಿಗೆ ಇಲಾಖೆ ಸಿಬ್ಬಂದಿ ನಿರ್ಗತಿಕರಾಗಲು ನಾವು ಬಿಡುವುದಿಲ್ಲ. ಯಾರೋ ನೀಡಿದ ತಪ್ಪು ಕಲ್ಪನೆಯಿಂದ ಮುಷ್ಕರ ಬೇಡ. ಮುಷ್ಕರದ ದುಷ್ಪರಿಣಾಮ ಸಾರಿಗೆ ಇಲಾಖೆ ಮೇಲಾಗುತ್ತದೆ. ಸಾರಿಗೆ ಇಲಾಖೆಯೊಂದು ಕುಟುಂಬ, ಕುಟುಂಬದಲ್ಲಿ ಚರ್ಚಿಸೋಣ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳೋಣ. ಮತ್ತೆ ಮುಷ್ಕರ ಮಾಡಿ ಸಾರ್ವಜನಿಕ ಟೀಕೆಗೆ ಗುರಿಯಾಗುವುದು ಬೇಡ ಎಂದು ಸಚಿವ ಸವದಿ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next