Advertisement

Hubli; ಸಭೆ ಮೊಟಕುಗೊಳಿಸಿದ ಅಧಿಕಾರಿಗಳು; ಪ್ರತಿಭಟನೆ ನಡೆಸಿದ ಮಠಾಧೀಶರು

02:30 PM May 04, 2024 | Team Udayavani |

ಹುಬ್ಬಳ್ಳಿ: ಪರವಾನಗಿ ಇಲ್ಲದೆ ಸಭೆ ನಡೆಸುವಂತಿಲ್ಲ ಎಂದು ಚುನಾವಣಾ ಅಧಿಕಾರಿಗಳು, ಪೊಲೀಸರು ಸಭೆ ಮೊಟಕುಗೊಳಿಸಿದ್ದಕ್ಕೆ ಅಸಮಾಧಾನಗೊಂಡ ನೂರಾರು ಮಠಾಧೀಶರು ಇಲ್ಲಿನ‌ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.

Advertisement

ಪರವಾನಿಗೆಗೆ ಅರ್ಜಿ ಸಲ್ಲಿಸಿದರೂ ಪರವಾನಿಗೆ ನೀಡದೆ, ಉದ್ದೇಶ ಪೂರ್ವಕ ಸಭೆ ಮೊಟಕುಗೊಳಿಸಿದ್ದಾರೆಂದು ಮಠಾಧೀಶರು ಆರೋಪಿಸಿದರು.

ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಗುರು-ವಿರಕ್ತ ಸಾಧು ಸಂತರ ಚಿಂತನ -ಮಂಥನ ಸಭೆ ಆಯೋಜಿಸಲಾಗಿತ್ತು. ಪರವಾನಗಿ ಪಡೆಯದೆ ಸಭೆಗೆ ಅವಕಾಶ ಇಲ್ಲವೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಶುಕ್ರವಾರವೇ ಪರವಾನಿಗೆಗೆ ಅರ್ಜಿ ಸಲ್ಲಿಸಿದರೂ ಪರವಾನಿಗೆ ನೀಡಿಲ್ಲವೆಂದು‌ ಮಠಾಧೀಶರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next