Advertisement

ಯುಪಿ; ಕಾರು ತಡೆದು ನಾಲ್ವರು ಮಹಿಳೆಯರ ಮೇಲೆ ಗ್ಯಾಂಗ್‌ರೇಪ್‌! ಹತ್ಯೆ

10:52 AM May 25, 2017 | |

ನೋಯ್ಡಾ: ಉತ್ತರಪ್ರದೇಶದಲ್ಲಿ ದುಷ್ಕರ್ಮಿಗಳು ಅಟ್ಟಹಾಸಗೈದಿದ್ದು, ಬುಲಂದ್‌ಶಹರ್‌ನಲ್ಲಿ  ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದನ್ನು ಅಡ್ಡಗಟ್ಟಿದ ಕಿರಾತಕರು  ಗನ್‌ಪಾಯಿಂಟ್‌ನಲ್ಲಿ  ನಾಲ್ವರು ಮಹಿಳೆಯರ ಮೇಲೆ ಬರ್ಬರವಾಗಿ ಗ್ಯಾಂಗ್‌ ರೇಪ್‌ ನಡೆಸಿ, ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆಗೈದು ನಗ-ನಗದಿನೊಂದಿಗೆ ಪರಾರಿಯಾದ ಕಳವಳಕಾರಿ ಘಟನೆ ಬುಧವಾರ ರಾತ್ರಿ ನಡೆದಿದೆ. 

Advertisement

ಬುಲಂದ್‌ಶಹರ್‌ನ ಆಸ್ಪತ್ರೆಯೊಂದರಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಮಗುವೊಂದನ್ನು ನೋಡಲೆಂದು  ಕಾರಿನಲ್ಲಿ ನಾಲ್ವರು ಮಹಿಳೆಯರು,ಇಬ್ಬರು ಮಕ್ಕಳು ಮತ್ತು ಇಬ್ಬರು ಪುರುಷರು ತೆರಳುತ್ತಿದ್ದರು. ಈ ವೇಳೆ 6 ರಿಂದ 7 ಮಂದಿ ದುಷ್ಕರ್ಮಿಗಳು ಕಾರಿನ ಚಕ್ರಕ್ಕೆ ಗುಂಡಿಕ್ಕಿ ನಿಲ್ಲಿಸಿ ಅಟ್ಟಹಾಸ ಗೈದಿದ್ದಾರೆ.

ದುಷ್ಕರ್ಮಿಗಳು ಕೈಯಲ್ಲಿ ಗನ್‌ ಹಿಡಿದು ಬೆದರಿಸಿ ನಾಲ್ವರು ಮಹಿಳೆಯರ ಮೇಲೆ ಗ್ಯಾಂಗ್‌ ರೇಪ್‌ ನಡೆಸಿ 
ದ್ದಾರೆ. ಈ ವೇಳೆ ತಡೆಯಲು ಮುಂದಾದ ಪುರುಷನನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆಗೈದಿದ್ದಾರೆ. ವ್ಯಕ್ತಿ ಸಾವನ್ನಪ್ಪು ತ್ತಿದ್ದಂತೆ 14 ಸಾವಿರ ರೂಪಾಯಿ ಹಣ ಮತ್ತು ಚಿನ್ನಾಭರಣಗಳೊಂದಿಗೆ ಸ್ಥಳದಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 

ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ನೂತನ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ  ಬಂದ ಬಳಿಕ ನಡೆದ ಈ ದುಷ್ಕರ್ಮಿಗಳ ಅಟ್ಟಹಾಸ ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. 

ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತಂಡಗಳನ್ನು ರಚಿಸಿ ದುಷ್ಕರ್ಮಿಗಳಿಗಾಗಿ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂತ್ರಸ್ಥ ಮಹಿಳೆಯರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. 

Advertisement

ಕಳೆದ ವರ್ಷ ದೆಹಲಿ -ಕಾನ್ಪುರ ಹೆದ್ದಾರಿಯ ದೋಸ್ತ್ಪುರ್‌ ಎಂಬಲ್ಲಿ ಇದೇ ರೀತಿಯಲ್ಲಿ ಕಾರು ಅಡ್ಡಗಟ್ಟಿ ತಾಯಿ ಮಗಳ ಮೇಲೆ ದುಷ್ಕರ್ಮಿಗಳು ಗ್ಯಾಂಗ್‌ ರೇಪ್‌ ನಡೆಸಿದ  ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next