Advertisement

Law: ಆಸ್ತಿ ಧ್ವಂಸಗೊಳಿಸಿದವರೇ, ನಷ್ಟದ ಮೊತ್ತ ಪಾವತಿಸಬೇಕು!

12:58 AM Feb 03, 2024 | Team Udayavani |

ಹೊಸದಿಲ್ಲಿ: ಹೋರಾಟ, ಪ್ರತಿಭಟನೆಯ ಹೆಸರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮಾಡು ವವರೇ ಎಚ್ಚರ. ಇನ್ನು ಮುಂದೆ ಧ್ವಂಸ ಮಾಡಿದವರೇ ನಷ್ಟ ಪಾವತಿಸಬೇಕು.ಇಲ್ಲದಿದ್ದರೆ ಜಾಮೀನು ಸಿಗದು.

Advertisement

ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯಲ್ಲಿ ಬದ ಲಾ ವಣೆ ತರು ವಂತೆ ರಾಷ್ಟ್ರೀಯ ಕಾನೂನು ಆಯೋಗ ಶಿಫಾ ರಸು ಮಾಡುವ ಸಾಧ್ಯ ತೆ ಯಿದೆ. ಇದರಿಂದ ಇತರರು ಧ್ವಂಸಕಾರ್ಯದಲ್ಲಿ ತೊಡಗುವುದನ್ನು ತಡೆಯಬಹುದು ಎಂಬ ಅಭಿಪ್ರಾಯವಿದೆ. 2015ರಲ್ಲೇ ಕೇಂದ್ರ ಸರಕಾರ ಈ ಶಿಫಾರಸನ್ನು ಮಾಡಿತ್ತು. ಆದರೆ ಮಸೂದೆ ಮಂಡಿಸಿರಲಿಲ್ಲ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ, ಕೆಲವು ಉಚ್ಚ ನ್ಯಾಯಾಲಯಗಳ ಆದೇಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾನೂನು ಆಯೋಗ ಅಧ್ಯಯನ ಆರಂಭಿಸಿತ್ತು. ಕ್ರಿಮಿನಲ್‌ ಮಾನಹಾನಿ ಕಾನೂನಿನ ಬಗ್ಗೆ ಇರುವ ವರದಿಯ ಕುರಿತೂ, ಕಾನೂನು ಆಯೋಗ ಪರಿಶೀಲಿಸುತ್ತಿದೆ. ಆದರೆ ಇದರಲ್ಲಿ ಯಾವುದೇ ಬದಲಾವಣೆ ಸೂಚಿಸುವ ನಿರೀಕ್ಷೆಯಿಲ್ಲ. ದೇಶದಲ್ಲಿನ ಬಹುತೇಕ ಪ್ರತಿಭಟನೆಗಳ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next