Advertisement

ಹಿಜಾಬ್ ವಿವಾದ: ಸಚಿವ ಸಂಪುಟದಲ್ಲಿ ಚರ್ಚೆ ಬಳಿಕ ಸೂಕ್ತ ನಿರ್ಧಾರ; ಸಚಿವ ಮಾಧುಸ್ವಾಮಿ

05:23 PM Feb 07, 2022 | Team Udayavani |

ಚಿಕ್ಕಮಗಳೂರು :  ಪ್ರತಿಭಟನೆ ಮಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ನಾವೆಲ್ಲರೂ ಪ್ರತಿಭಟನೆ ಮಾಡಿಯೇ ಈ ಹಂತಕ್ಕೆ ಬಂದಿರುವುದು. ಸದ್ಯ ನಡೆಯುತ್ತಿರುವ ಹಿಜಬ್ ವಿವಾದ ಸಚಿವ ಸಂಪುಟದಲ್ಲಿ ಚರ್ಚೆಯಾಗಿ ಸ್ಪಷ್ಟವಾದ ನಿರ್ಧಾರ ಬರುತ್ತದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಹಿಜಾಬ್ ವಿವಾದ ಸಚಿವ ಸಂಪುಟದಲ್ಲಿ ಚರ್ಚೆಯಾದ ಬಳಿಕವೇ ಒಂದು ಸ್ಪಷ್ಟವಾದ ನಿರ್ಧಾರಕ್ಕೆ ಬರುತ್ತದೆ. ಪ್ರತಿಭಟನೆ ಮಾಡುವುದಕ್ಕೆ ಎಲ್ಲರಿಗೂ ಸ್ವಾತಂತ್ರ್ಯವಿದೆ ನಾವೆಲ್ಲರೂ ಪ್ರತಿಭಟನೆ ಮಾಡಿಯೇ ಈ ಹಂತಕ್ಕೆ ಬಂದಿರುವುದು ಬಂದಿರುವುದು ಎಂದವರು ಹೇಳಿದರು.

ಸಿಎಂ ದೆಹಲಿ ಪ್ರಯಾಣ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸರ್ಕಾರದ ಅನೇಕ ಕಾರ್ಯಕ್ರಮಗಳ ನಿಮಿತ್ತ ದೆಹಲಿಗೆ ಹೋಗಿದ್ದಾರೆ. ನಾನು ಪೂರ್ವನಿಯೋಜಿತ ಕಾರ್ಯಕ್ರಮದ ಹಿನ್ನೆಲೆ ಒಂದು ದಿನ ತಡವಾಗಿ ದೆಹಲಿಗೆ ಹೋಗುತ್ತಿದ್ದೇನೆ. ನನ್ನ ದೆಹಲಿ ಭೇಟಿಗೆ, ನಾಯಕತ್ವ ಬದಲಾವಣೆ, ಸಚಿವ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಅಧ್ಯಕ್ಷರು ಕೂಡ ದೆಹಲಿಯಲ್ಲಿ ಇಲ್ಲ ಜಾರ್ಖಂಡ್ ನಲ್ಲಿದ್ದಾರೆ. ದೆಹಲಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ‌ ಇಲ್ಲ ಸಿಎಂ‌ ದೆಹಲಿ ಭೇಟಿ ನಂತರ ನಿಗಮ‌‌ ಮಂಡಳಿ ನೇಮಕವಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next