Advertisement

ರೈತ ಸ್ನೇಹಿ, ಬಹುಉಪಯೋಗಿ ಲಾವಂಚ…ಉಪಯೋಗ ಏನು?

01:56 PM Aug 25, 2021 | ಆದರ್ಶ ಕೊಡಚಾದ್ರಿ |
ಇದನ್ನು ಕಾಲಕ್ಕೆ ತಕ್ಕಂತೆ ಕತ್ತರಿಸದೆ ಬೆಳೆಯಲು ಬಿಟ್ಟರೆ ಬೇರುಗಳು ಮಣ್ಣಿನಲ್ಲಿ ಎರಡು ಮೀಟರ್ ವರೆಗೂ ಬೆಳೆಯುವ ಮೂಲಕ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ದರ್ಬೆಯ ಹುಲ್ಲಿನ ವಿನ್ಯಾಸವನ್ನು ಹೊಂದಿರುವ ಲವಂಚ ನಮ್ಮ ರೈತರಿಗೆ ಅಪರೂಪದ ಕೃಷಿಯೇನೂ ಅಲ್ಲ. ಆದರೆ ಸುಗಂಧ ದ್ರವ್ಯಕ್ಕಾಗಿ ಬಳಸ ಬಹುದಾದ ಈ ಹುಲ್ಲನ್ನು ವ್ಯಾಪಕ ಬೆಳೆದು ಆರ್ಥಿಕ ಲಾಭ ಮಾಡಿಕೊಳ್ಳುವ ಯತ್ನದಲ್ಲಿ ಮಾತ್ರ ರೈತರು ಸ್ಪಲ್ಪ ಪ್ರಮಾಣದಲ್ಲಿ ಹಿಂದೆ ಉಳಿದಿದ್ದಾರೆ. ಇದರ ಹುಲ್ಲಿನ ಕೆಳಭಾಗದಲ್ಲಿ ತಂತುಗಳಾಗಿ ಹರಡುವ ಬೇರುಗಳಿದ್ದು, ಸುಗಂಧಿತ ತೈಲವನ್ನು ಪಡೆಯಲು ಈ ಬೇರುಗಳನ್ನು ಭಟ್ಟಿಯಿಳಿಸುತ್ತಾರೆ...
Now pay only for what you want!
This is Premium Content
Click to unlock
Pay with

ಸುಹಾಸನೆಯುಕ್ತ ವಸ್ತುಗಳನ್ನು ತಯಾರಿಸುವಲ್ಲಿ ಬಳಸಲಾಗುವ ಪ್ರಮುಖ ಗಿಡಗಳಲ್ಲಿ ಭಾರತೀಯ ಮೂಲದ ಲವಂಚ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದೆ. ಲಾವಂಚ ಅಥವಾ ರಾಮಂಚ ಎಂಬ ಹೆಸರಿನಿಂದ ಕರೆಯಲ್ಪಡುವ ಇದು ಒಂದು ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯ. ಇದನ್ನು ವೈಜ್ಞಾನಿಕವಾಗಿ ವೆಟಿವೇರಿಯಾ ಜಿಜನಿಯೋಡೆಸ್‌. ಎಂದು ಕರೆಯಲಾಗಿದ್ದು “ವೆಟಿವೇರ್‌ ಹುಲ್ಲು’, “ಮಡಿವಾಳ ಬೇರು’, “ರಾಮಚ್ಚ”, “ಖಸ್‌’ ಎಂದೂ ಕೂಡಾ ಕರೆಯುತ್ತಾರೆ.

Advertisement

ಲಾವಂಚ ಬೆಳೆಯುವ ವಿಧಾನ
ಗೊಂಚಲಿನ ರೂಪದಲ್ಲಿರುವ ಈ ಲವಂಚ ಗಿಡವನ್ನು ಬಿಡಿಸಿ ಒಂದೊಂದು ಹಿಳ್ಳುಗಳಾಗಿ ಮಾಡಿ ಸರಿ ಸುಮಾರು ಆರರಿಂದ ಆರುವರೆ ಇಂಚುಗಳಷ್ಟು ಅಂತರದಲ್ಲಿ ಗಿಡವನ್ನು ನೆಡಬೇಕು. ಇದೊಂದು ಬಹುವಾರ್ಷಿಕ ಬೆಳೆಯಾಗಿದ್ದು ಸಾಮಾನ್ಯವಾಗಿ ಎಲ್ಲ ವಿಧದ ಮಣ್ಣಿನಲ್ಲೂ ಬೆಳೆಯಬಹುದು. ಸುಮಾರು 2ರಿಂದ 3 ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ನಾಟಿ ಮಾಡಿದ 10 ತಿಂಗಳಿಗೆ ಕೊಯ್ಲಿಗೆ ಬರುತ್ತದೆ.

ಲಾವಂಚ  ಬಹುವಾರ್ಷಿಕ ಬೆಳೆ
ನೆಟ್ಟು ಹತ್ತು ತಿಂಗಳಲ್ಲಿಯೇ ಇದರ ಬೇರನ್ನು ಕತ್ತರಿಸಿ ತೈಲ ತೆಗೆಯಬಹುದು. ಕತ್ತರಿಸುತ್ತಿದ್ದಂತೆಯೇ ಶೀಘ್ರದಲ್ಲಿ ಮೊತ್ತೊಂದು ಕೊಯ್ಲಿಗೆ ಸಿಗುವ ಲವಂಚ ಬಹುವಾರ್ಷಿಕ ಬೆಳೆಯಾಗಿದೆ.ಪಶ್ಚಿಮ ಮತ್ತು ಉತ್ತರ ಭಾರತದ ಕೃಷಿಕರಿಗೆ ಸಾಕಷ್ಟು ಪರಿಚಯವಿದೆ ಲವಂಚದ ಕೃಷಿ, ಪೊದೆ ಪೊದೆಯಾಗಿ ಬೆಳೆಯುತ್ತದೆ. ಮರಳು ಮಣ್ಣನ್ನು ಹೊರತುಪಡಿಸಿ ಬೇರೆ ಎಲ್ಲಾ ವಿಧದ ಮಣ್ಣಿನಲ್ಲೂ ಬೆಳೆಯಬಹುದು. ಸುಮಾರು ಒಂದೂವರೆಯಿಂದ ಎರಡು ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ಸಾಧಾರಣ ತೇವಾಂಶ ಹಾಗೂ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಹುಲುಸಾಗಿ ಜೊಂಡಿನಂತೆ ಹರಡುತ್ತದೆ.

ಇನ್ನು ಇದನ್ನು ಕಾಲಕ್ಕೆ ತಕ್ಕಂತೆ ಕತ್ತರಿಸದೆ ಬೆಳೆಯಲು ಬಿಟ್ಟರೆ ಬೇರುಗಳು ಮಣ್ಣಿನಲ್ಲಿ ಎರಡು ಮೀಟರ್ ವರೆಗೂ ಬೆಳೆಯುವ ಮೂಲಕ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ದರ್ಬೆಯ ಹುಲ್ಲಿನ ವಿನ್ಯಾಸವನ್ನು ಹೊಂದಿರುವ ಲವಂಚ ನಮ್ಮ ರೈತರಿಗೆ ಅಪರೂಪದ ಕೃಷಿಯೇನೂ ಅಲ್ಲ. ಆದರೆ ಸುಗಂಧ ದ್ರವ್ಯಕ್ಕಾಗಿ ಬಳಸ ಬಹುದಾದ ಈ ಹುಲ್ಲನ್ನು ವ್ಯಾಪಕ ಬೆಳೆದು ಆರ್ಥಿಕ ಲಾಭ ಮಾಡಿಕೊಳ್ಳುವ ಯತ್ನದಲ್ಲಿ ಮಾತ್ರ ರೈತರು ಸ್ಪಲ್ಪ ಪ್ರಮಾಣದಲ್ಲಿ ಹಿಂದೆ ಉಳಿದಿದ್ದಾರೆ. ಇದರ ಹುಲ್ಲಿನ ಕೆಳಭಾಗದಲ್ಲಿ ತಂತುಗಳಾಗಿ ಹರಡುವ ಬೇರುಗಳಿದ್ದು, ಸುಗಂಧಿತ ತೈಲವನ್ನು ಪಡೆಯಲು ಈ ಬೇರುಗಳನ್ನು ಭಟ್ಟಿಯಿಳಿಸುತ್ತಾರೆ.

Advertisement

ಲಾವಂಚ ಉಪಯೋಗಗಳು

ಲಾವಂಚದ ಹುಲ್ಲಿನಲ್ಲಿ ಪ್ರೊಟೀನ್ ಅಂಶ ಅತ್ಯಂತ ಅಧಿಕವಾಗಿದ್ದು, ಜೊತೆಗೆ ಕೊಬ್ಬಿನ ಅಂಶ ಕೂಡಾ ಇರುವುದರಿಂದ ಇದು ದನ, ಆಡು, ಕುರಿಗಳಿಗೆ ಉತ್ತಮ ಮೇವಾಗಿದ್ದು, ಇದನ್ನು ಒಣಗಿಸಿ ದಾಸ್ತಾನು ಮಾಡಿ ಉಪಯೋಗಿಸ ಬಹುದಾಗಿದೆ. ಸಾಮನ್ಯವಾಗಿ ಸುಹಾಸನೆಯುಕ್ತ ದ್ರವ್ಯಗಳ ತಯಾರಿಕೆಗೆ ಇದರ ಬಹುಪಾಲು ತೈಲವನ್ನು ಬಳಕೆ ಮಾಡಲಾಗುತ್ತದೆ. ದೇಶವಿದೇಶಗಳಲ್ಲಿ ಈ ದ್ರವ್ಯಗಳಿಗೆ ಬಾರಿ ಬೇಡಿಕೆ ಇದ್ದು ಹೆಚ್ಚಿನ ಬೆಲೆಯೂ ಇದೆ.

ಅಗರಬತ್ತಿ, ಸ್ನಾನದ ಸಾಬೂನು, ಸೌಂದರ್ಯ ಪ್ರಸಾಧನಗಳ ತಯಾರಿಕೆಯಲ್ಲೂ ಇದನ್ನು ಬಳಸಲಾಗುತ್ತದೆ. ಚರ್ಮ ರಕ್ಷಣೆಯಲ್ಲಿ ಲಾವಂಚದ ತೈಲ ಮಹತ್ವದ ಪಾತ್ರ ವಹಿಸುವುದು ಸಾಬೀತಾಗಿರುವುದರಿಂದ ಇದರ ಕ್ರೀಮುಗಳಿಗೆ ಬೇಡಿಕೆಯಿದೆ. ಲಾವಂಚ ಬೇರುಗಳನ್ನು ಆಗಾಗ ಕತ್ತರಿಸದೆ ಹಾಗೆ ಬೆಳೆಯಲು ಬಿಟ್ಟರೆ ಅವುಗಳು ನೆಲೆದಲ್ಲಿ ಹರಡಿ ಆಳವಾಗಿ ಇಳಿಯುತ್ತವೆ. ಮೇಲ್ಮುಖವಾಗಿ ಹರಿಯುವ ನೀರನ್ನು ನೆಲದಾಳಕ್ಕಿಳಿಸಿ ಭುವಿಗೆ ನೀರಿಂಗಿಸುವಂತೆ ಮಾಡುವ ಶಕ್ತಿ ಇದಕ್ಕಿದ್ದು, ನೀರಿನ ಅಂಶ ಕಡಿಮೆ ಇರುವ ಹೊಲದ ಬದಿಗಳಲ್ಲಿ ಈ ಗಿಡ ಬೆಳೆಸು ವುದರಿಂದ ನೀರನ್ನು ಹಿಡಿದಿಡಲು ನೆರವಾಗುತ್ತದೆ. ಅಲ್ಲದೆ ಅದರ ಬೇರುಗಳು ತೀವ್ರವಾದ ಮಳೆಯ ಹೊಡೆತದಿಂದ ಮಣ್ಣಿನ ಸವಕಳಿಯಾಗುವುದನ್ನು ತಡೆಯುತ್ತವೆ. ಮೊಡವೆ ಮತ್ತು ನೋವು ನಿವಾರಿಸುವ ಗುಣ ಹೊಂದಿರುವ ಇದನ್ನು ಸಂಧಿವಾತ, ಬೆನ್ನುನೋವು ನಿವಾರಣೆಗೆ ಬಳಸುತ್ತಾರೆ.

ಹಿಂದಿನ ಕಾಲದವರು ರೇಷ್ಮೆ ಸೀರೆ, ಮುಗುಟಗಳು ಹಾಳಾಗದಂತೆ ಹಾಗೂ ಜಿರಳೆ ತಿಗಣೆಗಳು ಕಪಾಟಿನ ಒಳಹೋಗದಂತೆ ಕಪಾಟು, ಟ್ರಂಕುಗಳಲ್ಲಿ ಲಾವಂಚದ ಬೇರುಗಳನ್ನು ಇಡುತ್ತಿದ್ದರು. ದೇಹಕ್ಕೆ ತಂಪನ್ನು ಒದಗಿಸುವ ಈ ಲಾವಂಚವನ್ನು ಜ್ವರದ ಸಮಸ್ಯೆಯಿಂದ ಬಳಲುತ್ತಿರುವವರು ಕಷಾಯ ಮಾಡಿ ಕುಡಿದರೆ ಜ್ವರ ಬಹುಬೇಗ ಗುಣಮುಖವಾಗುತ್ತದೆ.

ನೀರಿನ ಶುದ್ಧೀಕಾರಕ
ಕುಡಿಯುವ ನೀರಿಗೆ ಲವಂಚದ ಬೇರು ಹಾಕಿದರೆ ನೀರು ಸುಗಂಧ ಭರಿತವಾಗುವುದಲ್ಲದೆ ಆರೋಗ್ಯಕ್ಕೆ ಪೂರಕವಾಗಿಯತ್ತದೆ. ಇದಕ್ಕೆ ನೀರನ್ನು ಶುದ್ಧೀಕರಿಸುವ ವಿಶೇಷ ಶಕ್ತಿ ಇದ್ದು, ಕಲುಷಿತ ನೀರನ್ನು ಶುದ್ಧಿಕರುಸುವ ಹಾಗೂ ಅಂತ‍ರ್ಜಲ ಮಟ್ಟವನ್ನು ಹೆಚ್ಚಿಸಲು ಬಳಸಲಾಗುತ್ತದೆ.

ಲಾವಂಚದ ಇತರೆ ಉತ್ಪನ್ನಗಳು

ಲಾವಂಚ ಕೇವಲ ಸುಗಂಧ ದ್ಯವ್ಯ, ಔಷಧಗಳ ತಯಾರಿಕೆಯಲ್ಲಿ ಮಾತ್ರವಲ್ಲದೆ ಸುವಾಸನೆ ಬೀರುವ ಬೀಸಣಿಕೆಗಳು, ಹಾರಗಳು, ಚಾಪೆಗಳು, ಟೋಪಿಗಳು, ಮುಂತಾದವುಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇಷ್ಟೆ ಅಲ್ಲದೆ ಇದರ ಬೇರುಗಳನ್ನುಬಳಸಿ ಹೆಣೆದಿರುವ ಕುರ್ಚಿ, ಮಂಚಗಳಿಗೂ ಕೂಡಾ ಭಾರತೀಯ ಹಾಗೂ ಅಂತರ್ ರಾಷ್ಠ್ರೀಯ ಮಾರುಕಟ್ಟೆಯಲ್ಲಿಯೂ ಹೆಚ್ಚಿನ ಪ್ರಮಾಣದ ಬೇಡಿಕೆ ಪಡೆದಿವೆ. ಈ ಬೇರುಗಳಿಂದ ತಯಾರಿಸಲಾದ ವಸ್ತುಗಳಿಗೆ ನೀರು ಸಿಂಪಡಿಸಿದರೆ ಸುತ್ತಮುತ್ತಲಿನ ವಾತಾವರಣದಲ್ಲಿ ಸುವಾಸನೆ ತುಂಬಿಕೊಳ್ಳುತ್ತದೆ.

*ಆದರ್ಶ ಕೆ.ಜಿ

Advertisement

Udayavani is now on Telegram. Click here to join our channel and stay updated with the latest news.