Advertisement

ನೇಕಾರರ ಸಾಲಮನ್ನಾ ಯೋಜನೆಗೆ ಚಾಲನೆ

01:47 PM May 27, 2020 | Suhan S |

ತೇರದಾಳ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ದೇಶದ ಅಭಿವೃದ್ಧಿ ಜತೆಗೆ ನೇಕಾರರ ಮತ್ತು ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನರ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ಪಟ್ಟಣದಲ್ಲಿ ಕುರುಹಿನಶೆಟ್ಟಿ ಅರ್ಬನ್‌ ಬ್ಯಾಂಕ್‌ ಶಾಖೆಯಲ್ಲಿ ರಾಜ್ಯ ಸರಕಾರ ಘೋಷಣೆ ಮಾಡಿರುವ ನೇಕಾರರ ಸಾಲಮನ್ನಾ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನೇಕಾರರ 80 ಕೋಟಿ ರೂ.ಗಳ ಸಾಲಮನ್ನಾ ಘೋಷಣೆ ಮಾಡುವುದರ ಜತೆಗೆ ಆಯಾ ಬ್ಯಾಂಕ್‌ಗಳಲ್ಲಿ ಪ್ರಕ್ರಿಯೆ ಕೂಡ ಚಾಲನೆ ದೊರೆತಿದೆ. ಬೆಳಗಾವಿ ವಿಭಾಗದಲ್ಲಿ ಅಂದಾಜು 10 ಕೋಟಿಯಷ್ಟು ನೇಕಾರರ ಸಾಲಮನ್ನಾ ಆಗುವ ನಿರೀಕ್ಷೆ ಇದೆ. ಲಾಕ್‌ ಡೌನ್‌ದಿಂದಾಗಿ ನೇಕಾರರ ಬದುಕು ಹಾಳಾಗಿತ್ತು. ಸರಕಾರ ನೇಕಾರರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದು, ಶೀಘ್ರದಲ್ಲಿ ಕೈಮಗ್ಗ ನೇಕಾರರಿಗೆ ನೂಲು, ಬಿಮ್‌ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಸ್ಥಳೀಯ ಶಾಖೆಯ ಅಧ್ಯಕ್ಷ ಬಾಬು ಸೋರಗಾಂವಿ, ಶಂಕರ ಮಂಗಸೂಳಿ, ಶಿವಾನಂದ ಹಲಗಲಿ, ಚನ್ನಮಲ್ಲ ತೆಳಗಿನಮನಿ, ಸುರೇಶ ರೇನಕೆ, ಮಹಾವೀರ ಕೊಕಟನೂರ, ಪ್ರಭಾಕರ ಬಾಗಿ, ಬಾಳೂ ದೇಶಪಾಂಡೆ, ಶಾಖಾ ವ್ಯವಸ್ಥಾಪಕ ಪ್ರಕಾಶ ಬೆಳಕೂಡ, ಸುಭಾಸ ಗಾತಾಡೆ, ಮುನ್ನಾ ತಾಂಬೊಳಿ, ಶಂಕರ ಕುಂಬಾರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next