Advertisement

ಮದಗಜನ ಹಾಡಿಗೆ ಚಾಲನೆ

04:12 AM May 25, 2020 | Lakshmi GovindaRaj |

ಮದಗಜನ ಹಾಡಿಗೆ ಚಾಲನೆ ಶ್ರೀಮುರಳಿ ಅಭಿನಯದ “ಮದಗಜ’ ಚಿತ್ರ ಈಗಾಗಲೇ ಜೋರು ಸುದ್ದಿ ಮಾಡಿರುವುದು ಗೊತ್ತೇ ಇದೆ. ಈಗಾಗಲೇ ಒಂದು ಹಂತದ ಚಿತ್ರೀಕರಣವನ್ನೂ ಮುಗಿಸಿದೆ. ಸದ್ಯಕ್ಕೆ ಲಾಕ್‌ಡೌನ್‌ ಇರುವುದರಿಂದ ಚಿತ್ರೀಕರಣ ಸ್ಥಗಿತಗೊಳಿಸಿದೆಯಾದರೂ, ಇದರ ನಡುವೆ ಒಂದಷ್ಟು ಸಡಿಲಗೊಳಿಸಿದ್ದರಿಂದ ಚಿತ್ರತಂಡ ಇದೀಗ ಹಾಡೊಂದರ ಧ್ವನಿಮುದ್ರಣಕ್ಕೆ ಚಾಲನೆ ಕೊಟ್ಟಿದೆ.

Advertisement

ಹೌದು ನಿರ್ದೇಶಕ ಮಹೇಶ್‌ಕುಮಾರ್‌ ಅವರು, “ಮದಗಜ’ ಚಿತ್ರದ ಹಾಡಿನ ಧ್ವನಿಮುದ್ರಣಕ್ಕೆ ಚಾಲನೆ ಕೊಟ್ಟಿದ್ದಾರೆ. ಸಂಗೀತ ನಿರ್ದೇಶಕ ರವಿಬಸ್ರೂರು ಹಾಡಿಗೆ ರಾಗ ಸಂಯೋಜಿಸಿದ್ದು, ಹಾಡಿನ ಕೆಲಸ ಶುರು ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎರಡು ಹಾಡುಗಳಿಗೆ ಚೇತನ್‌ ಕುಮಾರ್‌ ಸಾಹಿತ್ಯ ಬರೆದಿದ್ದಾರೆ. ಉಳಿದಂತೆ ಇನ್ನೆರೆಡು ಹಾಡುಗಳಿಗೆ ರವಿಬಸ್ರೂರ್‌ ಮತ್ತು ಕಿನ್ನಲ್‌ ರಾಜ್‌ ಅವರ ಸಾಹಿತ್ಯವಿದೆ.

ಸದ್ಯಕ್ಕೆ ಶೇ.25 ರಷ್ಟು ಚಿತ್ರೀಕರಣ ಮುಗಿಸಿರುವ “ಮದಗಜ’ ಲಾಕ್‌ಡೌನ್‌ ಆಗುವ ಮೊದಲು ವಾರಣಾಸಿಯಲ್ಲಿ ಚಿತ್ರೀಕರಣ ನಡೆಸಿತ್ತು. ಲಾಕ್‌ಡೌನ್‌ ನಂತರ ಚಿತ್ರೀಕರಣಕ್ಕೆ ಅನುಮತಿ ಸಿಕ್ಕರೆ, ಮೈಸೂರಿನಿಂದ ಚಿತ್ರೀಕರಣ ಶುರುವಾಗಲಿದೆ. ಚಿತ್ರದಲ್ಲಿ ಶ್ರೀಮುರಳಿಗೆ ಮೊದಲ ಸಲ ಆಶಿಕಾ ರಂಗನಾಥ್‌ ನಾಯಕಿಯಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನ ಚಿತ್ರೀಕರಣ ಮೈಸೂರಿನಿಂದ ಶುರುವಾಗಲಿದೆ.

ಇನ್ನು “ಮದಗಜ’ ಚಿತ್ರದಲ್ಲಿ ಅನೇಕ ವಿಶೇಷತೆಗಳೂ ಇವೆ. ಲಾಕ್‌ಡೌನ್‌ ನಡುವೆಯೂ ಮದಗಜನ ಭರಾಟೆ ಜೋರಾಗಿದೆ. ಪ್ಯಾನ್‌ ಇಂಡಿಯಾ ವಿಲನ್ಸ್‌ ಜೊತೆ ಮದಗಜ ಹೊಡೆದಾಡಲಿದ್ದಾನೆ ಎಂಬುದು ಆ ವಿಶೇಷವಾದರೆ, ಸುಮಾರು ಸಾವಿರಾರು ಅಘೋರಿಗಳ ಮಧ್ಯೆ ಶ್ರೀಮುರಳಿ ಕಾಣಿಸಿಕೊಂಡಿರುವುದು ಕೂಡ ಚಿತ್ರದ ಹೈಲೈಟ್‌ಗಳಲ್ಲೊಂದು.

Advertisement

Udayavani is now on Telegram. Click here to join our channel and stay updated with the latest news.

Next