Advertisement

ಕೆಎ ಬಾರ್‌ ಕೆಎಲ್‌ ಚಿತ್ರಕ್ಕೆ ಚಾಲನೆ 

12:36 PM May 02, 2018 | Team Udayavani |

ಪ್ರಜ್ವಲ್‌ ಎಂ ರಾಜ ಅವರು ನಿರ್ಮಿಸುತ್ತಿರುವ “ಕೆಎ ಬಾರ್‌ ಕೆಎಲ್‌’ ಚಿತ್ರದ ಮುಹೂರ್ತ ಇತ್ತೀಚೆಗೆ ಜಯನಗರದ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ನಿರ್ಮಾಪಕರ ತಂದೆ ವಿ.ಎಲ್‌.ಮುನಿರಾಜ ಅವರು ಆರಂಭ ಫ‌ಲಕ ತೊರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

Advertisement

“ರಣತಂತ್ರ” ಹಾಗೂ “ನಿನ್ನ ಕಣ್ಣ ನೋಟದಲ್ಲಿ” ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಅನುಭವವಿರುವ ಯಶಸ್ವಿ ಬಾಲಾದಿತ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮೇ 18ರಿಂದ ಚಿತ್ರದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ.

ಕನಕಪುರ, ಬೆಂಗಳೂರು, ಕೇರಳ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಚೇತನ್‌ಕುಮಾರ್‌ ಸಂಗೀತ ನಿರ್ದೇಶನ ಹಾಗೂ ತನ್ವಿಕ್‌ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸುಜಿತ್‌ ರಾಥೋಡ್‌ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ನಿತ್ಯ ಅಭಿನಯಿಸುತ್ತಿದ್ದಾರೆ. ಹಿರಿಯ ನಟಿ ಸುಧಾರಾಣಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next