Advertisement
ಈ ಬೆನ್ನಲ್ಲೇ ಪಟ್ಟಿಯಲ್ಲಿರುವ ಹೆಸರುಗಳನ್ನು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ವಿರೋಧಿಸಿದ್ದಾರೆ. ಸಾಬಾ ಕರೀಂ ಅವರು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಇಂಗ್ಲೆಂಡ್ ತಂಡದ ಮಾಜಿ ನಾಯಕರುಗಳಾದ ನಾಸಿರ್ ಹುಸೇನ್ ಹಾಗೂ ಕೆವಿನ್ ಪೀಟರ್ಸನ್ ಹಾಗೂ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಹೆಸರನ್ನು ಶಿಫಾರಸು ಮಾಡಿದ್ದರು. ಆದರೆ ಸಾಬಾ ನೀಡಿದ ಪಟ್ಟಿಯನ್ನು ನೋಡಿದ ಕೂಡಲೇ ಅಮಿತಾಭ್ ಈ ಮೊದಲೇ ತಿರಸ್ಕರಿಸಿದ್ದರು ಎನ್ನಲಾಗಿದೆ. ಅಮಿತಾಭ್ ಅವರಿಗೆ ಭಾರತದ ಮಾಜಿ ಕ್ರಿಕೆಟಿಗರುಗಳಾದ ಚಂದು ಬೋರ್ಡೆ, ನಾರಿ ಕಂಟ್ರಾಕ್ಟರ್, ಎರ್ರಾಪಳ್ಳಿ ಪ್ರಸನ್ನ ಅಥವಾ ಅಬ್ಟಾಸ್ ಅಲಿ ಬೇಗ್ ರಂತಹ ದಿಗ್ಗಜರಲ್ಲಿ ಯಾರಾದರೊಬ್ಬರನ್ನು ಉಪನ್ಯಾಸಕ್ಕೆ ಆಯ್ಕೆ ಮಾಡಬೇಕು ಎನ್ನುವ ಒಲವಿತ್ತು ಎನ್ನಲಾಗಿದೆ. Advertisement
ದಿವಂಗತ ಪಟೌಡಿ ಉಪನ್ಯಾಸ: ಸಾಬಾ ಕರೀಂ ಶಿಫಾರಸಿಗೆ ಅಮಿತಾಭ್ ಅಸಮಾಧಾನ
12:16 PM May 13, 2018 | |
Advertisement
Udayavani is now on Telegram. Click here to join our channel and stay updated with the latest news.