Advertisement

ಅಜೆಕಾರು: ಬೈಹುಲ್ಲು ಸಾಗಾಟದ ಲಾರಿ ಅಗ್ನಿಗಾಹುತಿ

09:19 AM Feb 06, 2020 | Sriram |

ಅಜೆಕಾರು: ಬೈಹುಲ್ಲು ಸಾಗಿಸುತ್ತಿದ್ದ ಲಾರಿವೊಂದಕ್ಕೆ ವಿದ್ಯುತ್ ತಂತಿ ತಗುಲಿ ಬೈಹುಲ್ಲು  ಮೂಟೆ ಸಂಪೂರ್ಣ ಸುಟ್ಟು ಹೋದ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ಸಮೀಪದ ಕಾಡುಹೊಳೆ ಎಂಬಲ್ಲಿ ಬುಧವಾರ ಸಂಭವಿಸಿದೆ.

Advertisement

ಅದೃಷ್ಟವಶಾತ್ ಲಾರಿಯಲ್ಲಿ ಇದ್ದವರು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೆಬ್ರಿಯಿಂದ ಅಂಡಾರು-ಶಿರ್ಲಾಲು ಮಾರ್ಗವಾಗಿ ಬೈಹುಲ್ಲು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್‌ ತಂತಿ ತಗುಲಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.


ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.


Advertisement

Udayavani is now on Telegram. Click here to join our channel and stay updated with the latest news.

Next