Advertisement

ಲಾರಿ ಢಿಕ್ಕಿ:  ದ್ವಿಚಕ್ರ ಸವಾರ ಸಾವು

12:19 PM Aug 14, 2018 | Team Udayavani |

ಪುತ್ತೂರು: ಇಲ್ಲಿನ ಬೈಪಾಸ್‌ ರಸ್ತೆಯ ಉರ್ಲಾಂಡಿ ಸಮೀಪ ಸೋಮವಾರ ಮಧ್ಯಾಹ್ನ ಈಚರ್‌ ಲಾರಿ ಢಿಕ್ಕಿ ಹೊಡೆದು ದ್ವಿಚಕ್ರ ಸವಾರ ಮೃತಪಟ್ಟಿದ್ದಾರೆ.

Advertisement

ಪಟ್ನೂರು ಗ್ರಾಮದ ಪರಮಾರು ನಿವಾಸಿ, ಕೃಷಿಕ ಮಾಯಿಲಪ್ಪ ಗೌಡ (45) ಮೃತಪಟ್ಟವರು. ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಇವರು ಸೋಮವಾರ ಮಧ್ಯಾಹ್ನ ಪುತ್ತೂರು ಸಂತೆಯಿಂದ ತರಕಾರಿ ಖರೀದಿಸಿ ಮನೆಗೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ. 

ಮೃತರು ಪತ್ನಿ ಮತ್ತು ತಾಯಿಯನ್ನು ಅಗಲಿದ್ದಾರೆ. 

ಪುತ್ತೂರಿನಿಂದ ಬೈಪಾಸ್‌ ರಸ್ತೆಯಾಗಿ ನೆಹರೂನಗರ ಕಡೆ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಈಚರ್‌ ಲಾರಿ ಢಿಕ್ಕಿಯಾಗಿದೆ. ರಸ್ತೆಗೆ ಎಸೆಯಲ್ಪಟ್ಟ ಮಾಯಿಲಪ್ಪ  ಅವರ ತಲೆ, ಬೆನ್ನು, ಕೈಗೆ ಗಂಭೀರ ಗಾಯವಾಗಿತ್ತು. ತತ್‌ಕ್ಷಣ ಲಾರಿ ಚಾಲಕ  ಅವರನ್ನು ಆಸ್ಪತ್ರೆಗೆ  ಕೊಂಡೊಯ್ದರೂ ಅವರು ದಾರಿ ಮಧ್ಯೆ ಕೊನೆಯುಸಿರೆಳೆದರು. ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next