Advertisement

ಎತ್ತಿನ ಬಂಡಿಗೆ ಲಾರಿ ಡಿಕ್ಕಿ : ಓರ್ವ ವ್ಯಕ್ತಿ ಒಂದು ಎತ್ತು ಸಾವು

09:48 AM Sep 01, 2019 | keerthan |

ಚಿತ್ರದುರ್ಗ: ಎತ್ತಿನ ಬಂಡಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಹಾಗೂ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.

Advertisement

ಸೋಮಗುದ್ದು ಗ್ರಾಮದ ಕೆಂಚಪ್ಪ(40) ಮೃತ ವ್ಯಕ್ತಿ.

ಬೆಳಗ್ಗೆ 6 ಗಂಟೆ ವೇಳೆಗೆ ಚಳ್ಳಕೆರೆ ಹಿರಿಯೂರು ರಾಷ್ಟ್ರೀಯ ಹೆದ್ದಾರಿ 150ರ ನಿರ್ಮಲಾ ಲಾಡ್ಜ್ ಬಳಿ ಹಿರಿಯೂರು ಕಡೆಯಿಂದ ಬಂದ ಲಾರಿ ಎತ್ತಿನ ಗಾಡಿಗೆ ಡಿಕ್ಕಿಯಾಗಿದೆ.

ಲಾರಿ ಹೊಡೆದ ರಭಸಕ್ಕೆ ಬಂಡಿ ನಡೆಸುತ್ತಿದ್ದ ಕೆಂಚಪ್ಪ ಹಾಗೂ ಎತ್ತು ಸ್ಥಳದಲ್ಲೇ ಅಸುನೀಗಿದ್ದಾರೆ. ಎತ್ತಿನ ಬಂಡಿ‌ ನಜ್ಜುಗುಜ್ಜಾಗಿದೆ.

ಲಾರಿ ಚಾಲಕನ ಅಜಾಗರೂಕತೆ ಹಾಗೂ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

Advertisement

ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next