Advertisement

ಧರಂ ಹುಟ್ಟುಹಬ್ಬಕ್ಕೆ ಅದ್ದೂರಿ ಸಮಾವೇಶ

06:35 AM Jul 28, 2017 | Team Udayavani |

2009ರ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಧರ್ಮಸಿಂಗ್‌ ಸ್ವಲ್ಪ ಮೆತ್ತಗಾಗತೊಡಗಿದರು. ಆರೋಗ್ಯ ಕ್ಷೀಣಿಸುತ್ತಾ ಬರತೊಡಗಿತು. ಹಲವು ಸಲ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೊನೆಯುಸಿರೆಳೆಯುವ ಮುನ್ನವೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದುದು ಅವರಲ್ಲಿನ ಉತ್ಸುಕತೆ ನಿರೂಪಿಸುತ್ತಿತ್ತು. 

Advertisement

ಧರ್ಮಸಿಂಗ್‌ ಅವರ 80ನೇ ಜನ್ಮದಿನವನ್ನು 2016ರ ಡಿ. 25ರಂದು ಕಲಬುರಗಿ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಅದ್ದೂರಿಯಾಗಿ ಕಾಂಗ್ರೆಸ್‌ ಸಮಾವೇಶದೊಂದಿಗೆ ಆಚರಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಸಂಸದೀಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಸೇರಿ ಕೇಂದ್ರದ ನಾಯಕರು, ರಾಜ್ಯದ ಸಚಿವರ ದಂಡೇ ಆಗಮಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next