Advertisement

Mangaluru: ಕಾರಿನಿಂದ ಲ್ಯಾಪ್‌ಟಾಪ್‌ ಕಳವು

07:15 PM Jun 08, 2024 | Team Udayavani |

ಮಂಗಳೂರು: ಕಾರಿನಿಂದ ಲ್ಯಾಪ್‌ಟಾಪ್‌ ಕಳವು ಮಾಡಿರುವ ಘಟನೆ ನಗರದ ಹಂಪನಕಟ್ಟೆಯ ಸಮೀಪ ಸಂಭವಿಸಿದೆ.

Advertisement

ಶುಕ್ರವಾರ ಸಂಜೆ 5 ಗಂಟೆಗೆ ಹಂಪನಕಟ್ಟೆ ಕೆ.ಎಸ್‌.ರಾವ್‌ ರಸ್ತೆಯ ಜುವೆಲ್ಲರಿ ಶಾಪ್‌ ಪಕ್ಕದಲ್ಲಿ ರಸ್ತೆ ಬದಿಯಲ್ಲಿ ಕಾರು ಮಾಲಕರು ಕಾರನ್ನು ನಿಲ್ಲಿಸಿ ವಾಚ್‌ ರಿಪೇರಿ ಅಂಗಡಿಗೆ ಹೋಗಿ ಅರ್ಧ ಗಂಟೆ ಬಿಟ್ಟು ವಾಪಸ್‌ ಬಂದಿದ್ದರು. ಆಗ ಡ್ರೈವರ್‌ ಸೀಟ್‌ನ ಪಕ್ಕದ ಸೀಟಿನಲ್ಲಿಟ್ಟಿದ್ದ ಲ್ಯಾಪ್‌ಟಾಪ್‌ ಕಳವಾಗಿರುವುದು ಗಮನಕ್ಕೆ ಬಂದಿದೆ. ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next