Advertisement

ಜಮೀನು ಬಳಕೆ: 15 ದಿನದ ಗಡುವು 

12:40 AM Sep 09, 2021 | Team Udayavani |

ಬೆಂಗಳೂರು: ಕೈಗಾರಿಕಾ ಉದ್ದೇಶಗಳಿಗಾಗಿ ಕೆಐಎಡಿಬಿ ಮೂಲಕ ಪಡೆದ ಜಮೀನನ್ನು ನಿಗದಿತ ಅವಧಿಯಲ್ಲಿ ಬಳಸಬೇಕು. ಇಲ್ಲದಿದ್ದರೆ 15 ದಿನಗಳಲ್ಲಿ ನೋಟಿಸ್‌ ನೀಡಿ ವಾಪಸ್‌ ಪಡೆಯ ಲಾಗುತ್ತದೆ ಎಂದು  ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಎಚ್ಚರಿಕೆ ನೀಡಿದ್ದಾರೆ.

Advertisement

ನೋಟಿಸ್‌ ನೀಡುವ ಪ್ರಕ್ರಿಯೆ ಆರಂಭವಾಗಿದೆ. 15 ದಿನದಲ್ಲಿ ಸಮ ರ್ಪಕ ಉತ್ತರ ಬಾರದಿದ್ದರೆ ಮತ್ತೂಂದು ನೋಟಿಸ್‌ ನೀಡಿ ಜಮೀನು ವಾಪಸ್‌ ಪಡೆಯಲಾಗುವುದು ಎಂದರು. ರಾಜ್ಯದ ಯಾವ ಯಾವ ಕಡೆ ಜಮೀನನ್ನು ಖಾಲಿ ಬಿಡಲಾಗಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗುವುದು ಎಂದರು.

ಮೊದಲ ಸ್ಥಾನ:

ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಪ್ರಿಲ್‌ನಿಂದ ಜೂನ್‌ ವರೆಗೆ  62,085 ಕೋಟಿ ರೂ. ವಿದೇಶಿ ನೇರ ಬಂಡವಾಳ ಆಕರ್ಷಿಸಿ ರಾಜ್ಯ ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟಾರೆ ವಿದೇಶಿ ಹೂಡಿಕೆಯಲ್ಲಿ ರಾಜ್ಯದ ಪಾಲು ಶೇ. 48ರಷ್ಟಿದ್ದು, 2019-20 ರಲ್ಲಿ 30,746 ಕೋಟಿ ರೂ. ಬಂಡವಾಳ ಆಕರ್ಷಿಸಿ ರಾಜ್ಯವು 3ನೇ ಸ್ಥಾನದಲ್ಲಿತ್ತು.

ನವೆಂಬರ್ಗೆ ಇನ್ವೆಸ್ಟ್ ಕರ್ನಾಟಕ :

Advertisement

ನವೆಂಬರ್‌ನಲ್ಲಿ ಇನ್ವೆಸ್ಟ್‌ ಕರ್ನಾಟಕ, ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ಸಿದ್ಧತೆ ನಡೆಯುತ್ತಿದೆ. ಸಿಎಂ ಜತೆ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದರು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಮುನ್ನ ನಾಲ್ಕು ವಿಭಾಗಗಳಲ್ಲಿ ಕೈಗಾರಿಕೆ ಅದಾಲತ್‌ ಸಹ ನಡೆಸಲಾಗುವುದು. ಈ ನಡುವೆ ದುಬಾೖಯಲ್ಲಿ ಬಂಡವಾಳ ಹೂಡಿಕೆ ಮೇಳ ನಡೆಯಲಿದ್ದು ಕರ್ನಾಟಕದ ವತಿಯಿಂದಲೂ ರೋಡ್‌ ಶೋ ನಡೆಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next