Advertisement

ಗಣೇಶ ಪ್ರತಿಷ್ಠಾಪನೆಗೆ ಭೂಮಿಪೂಜೆ

12:53 PM Aug 21, 2017 | |

ತಾಳಿಕೋಟೆ: ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾಗಣಪತಿ ಮಹಾಮಂಡಳಿಯವರ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುವ ಸ್ಥಳದಲ್ಲಿ ಭೂಮಿಪೂಜಾ ಕಾರ್ಯಕ್ರಮವನ್ನು ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಹಾಗೂ ಸಂತೋಷಭಟ್‌ ಜೋಶಿ ನೆರವೇರಿಸಿದರು. ಈ ವೇಳೆ ಉಭಯ ಶ್ರೀಗಳು ಮಾತನಾಡಿ, ಹಿಂದೂ ಮಹಾಗಣಪತಿ ಮಹಾಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಯ ಸ್ಥಳದಲ್ಲಿ 9 ದಿನದವರೆಗೆ ಜನರಲ್ಲಿ ದೇಶಾಭಿಮಾನ ಹೆಚ್ಚಿವಂತಹ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಇಂತಹ ಜಾಗೃತಿ ಕಾರ್ಯಕ್ರಮಗಳೊಂದಿಗೆ ಗಣೇಶ ಉತ್ಸವದ ಅರ್ಥ ತಿಳಿಸುವಂತಹ ಕಾರ್ಯ ಯುವಕ ಮಂಡಳಿಯವರು ಪ್ರತಿ ವರ್ಷ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಹಿಂದೂ ಮಹಾಗಣಪತಿ ಮಹಾ ಮಂಡಳಿಯ ಕಾಶೀನಾಥ ಅರಳಿಚಂಡಿ, ಪ್ರಕಾಶ ಪಾಟೀಲ, ಸಂಗನಗೌಡ ಪಾಟೀಲ, ಕಿರಣ ಬಡಿಗೇರ, ರಾಘವೇಂದ್ರ ವಿಜಾಪುರ, ವಿಶ್ವನಾಥ ಮೈಲೇಶ್ವರ, ಪ್ರತೀಕ ಮಹೇಂದ್ರಕರ, ಸಾಯಿ ಸುಭೇದಾರ, ಅಶ್ವಿ‌ನಕುಮಾರ ಬೇದರಕರ, ವಿನಯ ಸ್ಥಾವರಮಠ, ಗುರು ಕಲಾಲ, ಬಾಬು ಅಗಸರ, ಪ್ರಕಾಶ ಕಟ್ಟಿಮನಿ, ಶ್ರೀನಿವಾಸ ಕಟ್ಟಿಮನಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next