Advertisement

ಒಂದೇ ದಿನದಲ್ಲಿ ಭೂ ಪರಿವರ್ತನೆ ವ್ಯವಸ್ಥೆ ಜಾರಿ: ಆರ್‌.ಅಶೋಕ್

08:42 PM Dec 08, 2021 | Team Udayavani |

ಬೆಂಗಳೂರು: ಭೂ ಪರಿವರ್ತನೆಗಾಗಿ ಅಲೆದಾಡುವುದು ತಪ್ಪಿಸಲು ಒಂದೇ ದಿನದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಭೂಮಿ ಖರೀದಿಸಿದವರು ಅದರ ಪರಿವರ್ತನೆಗಾಗಿ ಆರು ತಿಂಗಳ ಕಾಯಬೇಕಾಗಿತ್ತು.ಆದರೆ ಇನ್ನು ಮುಂದೆ ಅರ್ಜಿ ಹಾಕಿದ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ಸರ್ಕಾರದ ಈ ಕ್ರಮದಿಂದ ನೂರಾರು ಕೋಟಿ ರೂಗಳ ಒಳ ವ್ಯವಹಾರಗಳಿಗೆ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.

ಕೈಗಾರಿಕೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಭೂಮಿ ಖರೀದಿಸಿದವರು ಪರಿವರ್ತನೆಗಾಗಿ ಅಲೆದಾಡುವಂತಾಗಿತ್ತು. ಇದನ್ನು ತಪ್ಪಿಸಲು ನೂತನ ವ್ಯವಸ್ಥೆಗೆ ಸರ್ಕಾರ ಮುಂದಾಗಿದೆ.

ಭೂ ಪರಿವರ್ತನೆ ಕಾರ್ಯಕ್ಕೆ ಅರ್ಜಿ ಸಲ್ಲಿಸಿದವರಿಗೆ ಒತ್ತುವರಿ ಭೂಮಿಯಾಗಿರಬಾರದು.ಪರಿಶಿಷ್ಟರ ಭೂಮಿಯಾಗಿರಬಾರದು ಕೆಲವು ಕರಾರುಗಳನ್ನು ವಿಧಿಸಲಾಗುತ್ತದೆ.ಈ ಕರಾರುಗಳನ್ನು ಅವರು ಪೂರೈಸಿದ್ದರೆ ಸಾಕು ಎಂದರು.

Advertisement

ಇದನ್ನೂ ಓದಿ:ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ

ರೈತರಿಗೆ ಪರಿಹಾರ
ಅಕಾಲಿಕ ಮಳೆಯಿಂದ ಬೆಳೆ ನಷ್ಟಕ್ಕೀಡಾದ ರೈತರಿಗೆ ಪರಿಹಾರ ವಿತರಣೆ ಕಾರ್ಯ ಚುರುಕುಗೊಳಿಸಿರುವ ರಾಜ್ಯ ಸರ್ಕಾರ, ಕಳೆದ ವಾರದ ವೇಳೆಗೆ 6.6 ಲಕ್ಷ ರೈತರಿಗೆ 443 ಕೋಟಿ ರೂ. ವಿತರಣೆ ಮಾಡಿತ್ತು.

ಬುಧವಾರದ ವೇಳೆಗೆ 10,62,237 ರೈತರಿಗೆ 681.90 ಕೋಟಿ ರೂ. ವಿತರಿಸಿದೆ. ಮುಖ್ಯಮಂತ್ರಿಯವರು ಅಧಿಕಾರಿಗಳ ಸಭೆ ನಡೆಸುವ ಮುನ್ನ 1.51 ಲಕ್ಷ ರೈತರಿಗೆ 130 ಕೋಟಿ ರೂ. ಮಾತ್ರ ಪರಿಹಾರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿತ್ತು. ನ.19 ರಂದು ಮುಖ್ಯಮಂತ್ರಿಯವರ ಸಭೆಯ ನಂತರ ಪರಿಹಾರ ವಿತರಣೆ ಚುರುಕುಗೊಂಡಿದ್ದು 9.10 ಲಕ್ಷ ರೈತರಿಗೆ 551 ಕೋಟಿ ರೂ.ವರೆಗೆ ಪರಿಹಾರ ಜಮೆಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next