Advertisement
ತಾಲೂಕಿನ ಗಾವಡಗೆರೆ ಹೋಬಳಿಯ ಹಿರಿಕ್ಯಾತನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹೆದ್ದಾರಿಯು ತಾಲೂಕಿನ ಹಳೇರಾಮೇನಹಳ್ಳಿ, ಕಟ್ಟೆಮಳಲವಾಡಿ, ಹಾಳಗೆರೆ, ಪಿರಿಯಾಪಟ್ಟಣ ಮಾರ್ಗವಾಗಿ ಕೊಡಗಿಗೆ ಸಂಪರ್ಕ ಕಲ್ಪಿಸಲಾಗಿದೆ.
Related Articles
Advertisement
ಎಲ್ಲಿಗೆ ಎಷ್ಟು ಅನುದಾನ: ನರೇಗಾ ಯೋಜನೆಯಡಿ ತಾಲೂಕಿನ ಬಿಳಿಗೆರೆ ಗ್ರಾಪಂಯ ಮಾರಗೌಡನಹಳ್ಳಿಯಲ್ಲಿ 44.3 ಲಕ್ಷ ರೂ.ವೆಚ್ಚದ ರಸ್ತೆ-ಚರಂಡಿ, ಬಿಳಿಗೆರೆ 61.7 ಲಕ್ಷ ರೂ. ರಸ್ತೆ-ಚರಂಡಿ ಮತ್ತು 14ನೇ ಹಣಕಾಸು ಯೋಜನೆಯಡಿ 20 ಲಕ್ಷ ರೂ.ವೆಚ್ಚದ ರಾಜೀವಗಾಂಧಿ ಸೇವಾಕೇಂದ್ರ ಮತ್ತು ಅಂಗನವಾಡಿ ಕೇಂದ್ರಕ್ಕೆ 5 ಲಕ್ಷ ರೂ.,
ಹಿರಿಕ್ಯಾತನಹಳ್ಳಿ ರಸ್ತೆ-ಚರಂಡಿ ಕಾಮಗಾರಿಗೆ 69 ಲಕ್ಷ ರೂ., ತಟ್ಟೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯಾನವನ ಹಾಗೂ ಗ್ರಾಮಪರಿಮಿತಿಯಲ್ಲಿ ರಸ್ತೆ-ಚರಂಡಿ ನಿರ್ಮಾಣಕ್ಕೆ 39 ಲಕ್ಷ ರೂ. ವಿನಿಯೋಗಿಸಲಾಗಿದೆ ಎಂದು ತಾಲೂಕು ಪಂಚಾಯ್ತಿ ಇಒ ಕೃಷ್ಣಕುಮಾರ್ ಮಾಹಿತಿ ನೀಡಿದರು.
ಈ ವೇಳೆ ಜಿಪಂ ಸದಸ್ಯೆ ಸಾವಿತ್ರಿ, ಗ್ರಾಪಂ ಅಧ್ಯಕ್ಷೆ ಶಿಲ್ಪಾ, ಮಾಜಿ ಅಧ್ಯಕ್ಷ ಶ್ರೀಧರ್, ಪಿಡಿಒ ಶ್ರೀನಿವಾಸ್, ಸದಸ್ಯರಾದ ಸ್ವಾಮಿಗೌಡ, ಮಹೇಶ್, ದಿನೇಶ, ರೂಹಿಬಾನು, ಭಾಗ್ಯಮ್ಮ, ತಮ್ಮೇಗೌಡ, ಯ.ಜಗದೀಶ್, ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಎಸ್.ಯೋಗಾನಂದಕುಮಾರ್, ಮಾಜಿ ಅಧ್ಯಕ್ಷ ಹನಗೋಡು ಮಂಜುನಾಥ್, ಕೃಷ್ಣಕುಮಾರ್, ಮುಖಂಡರಾದ ಕೆ.ಟಿ.ಗೋಪಾಲ್, ಸತೀಶ್ ಇತರರಿದ್ದರು.