Advertisement

ಮೀಸಲಾತಿ ವ್ಯವಸ್ಥೆ ರದ್ದು ಮಾಡಲು ಬಿಜೆಪಿ ದೃಢಸಂಕಲ್ಪ: ಲಾಲು

08:22 PM May 16, 2024 | Team Udayavani |

ನವದೆಹಲಿ: ಬಿಜೆಪಿ ಈ ಬಾರಿ ಗೆದ್ದರೆ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವ ದೃಢಸಂಕಲ್ಪ ಮಾಡಿದೆ ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಆರೋಪಿಸಿದ್ದಾರೆ.

Advertisement

ಜಾಲತಾಣದ ಮೂಲಕ ದೇಶದ ಜನರಿಗೆ ಮನವಿ ಮಾಡಿರುವ ಲಾಲು, ಬಿಜೆಪಿ ಬಗ್ಗೆ ಎಚ್ಚರಿಕೆ ಇರಲಿ. ಮೀಸಲಾತಿ ರದ್ದು ಮಾಡಲು ಬಿಜೆಪಿ ಹೊರಟಿದೆ. ಒಮ್ಮೆ ಸಂವಿಧಾನ ಬದಲಾದರೆ, ದೇಶದಲ್ಲಿ ಪ್ರಜಾಪ್ರಭುತ್ವವೇ ಇರುವುದಿಲ್ಲ. ಆಗ ನೀವು ದೇಶದಲ್ಲಿ ಸಮಾನ ನಾಗರಿಕರಾಗಿ ಉಳಿಯುವುದಿಲ್ಲ. ಜನರಿಗೆ ಯಾವುದೇ ಸಾಂವಿಧಾನಿಕ ಹಕ್ಕುಗಳು, ಪರಿಹಾರಗಳು ದೊರೆಯುವುದಿಲ್ಲ . ಕೆಲವೇ ಜನರ ಗುಲಾಮರಾಗಿರುತ್ತೀರಿ ಎಂದು ಎಚ್ಚರಿಸಿದ್ದಾರೆ. ಇಂಡಿಯಾ ಒಕ್ಕೂಟದ  ಭಾಗವಾಗಿರುವ ಆರ್‌ಜೆಡಿ, ಬಿಹಾರದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಜತೆಗೂಡಿ ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next