Advertisement

ಗಾನ-ನಾಟ್ಯ-ಸಂಗೀತ ಸಂಗಮ

10:08 AM Jan 07, 2019 | Team Udayavani |

ಲಕ್ಷ್ಮೇಶ್ವರ: ಪುಲಿಗೆರೆ ಉತ್ಸವದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರಾದ ಬೆಂಗಳೂರಿನ ಭರತನಾಟ್ಯ ಪ್ರವೀಣ ಅಶೋಕ ಕುಮಾರ ಗರಡಿಯಲ್ಲಿ ಪ್ರಾವಿಣ್ಯತೆ ಹೊಂದಿದ ನಾಟ್ಯಾಂಜಲಿ ನೃತ್ಯಶಾಲೆ ಕಲಾವಿದರು ಪ್ರಸ್ತುತಪಡಿಸಿದ ಭರತನಾಟ್ಯ ನೆರೆದಿದ್ದ ಅಪಾರ ಪ್ರೇಕ್ಷಕರನ್ನು ಸೆಳೆಯಿತು. ಆರಂಭದಲ್ಲಿ ಕಾರ್ಯಕ್ರಮಕ್ಕೆ ಶುಭ ಕೋರುವ ಪುಷ್ಪಾಂಜಲಿ ನೃತ್ಯವನ್ನು ರಾಗ ಅಮೃತವರ್ಷಿಣಿ ಆದಿತಾಳದಲ್ಲಿ ಪ್ರಸ್ತುತಪಡಿಸಿದರು. ನಂತರ ವಿಘ್ನನಾಶಕ ಗಣಪತಿ ವಂದನೆ ಆರಭಿ ರಾಗದಲ್ಲಿ ನೃತ್ಯದ ಮೂಲಕ ಗಣಪತಿಯ ಆಶೀರ್ವಾದ ಕೇಳಿದ ಭಂಗಿಗೆ ಮನ ಸೋತರು. ಹೀಗೆ ವಿವಿಧ ರೀತಿಯ ಪ್ರದರ್ಶನ ನೀಡಿದರು.

Advertisement

ಸುಬೇಂದ್ರ ಜೈನ್‌, ಆದಿತಿ ಶೋಕ, ಸ್ಫೂರ್ತಿ ಅಶೋಕ, ಚಂದನಾ, ರೋಶನಿ, ವರ್ಷಿನಿ, ಸನ್ಮತಿ ಇವರು ಉತ್ಸವದ ಎರಡನೇ ದಿನಕ್ಕೆ ರಂಗು ತಂದರು. ಎರಡು ಗಂಟೆಗೂ ಅಧಿಕ ಕಾಲ ವಿವಿಧ ರೂಪಕ ಪ್ರಸ್ತುತಪಡಿಸಿದರು.

ಮಂತ್ರ ಮುಗ್ಧಗೊಳಿಸಿದ ಭರತನಾಟ್ಯ
ಲಕ್ಷ್ಮೇಶ್ವರ: ಪುಲಿಗೆರೆ ಉತ್ಸವದ ಎರಡನೇ ದಿನ ಸಂಜೆ ಬೆಂಗಳೂರಿನ ಪ್ರೀತಿ ಸುಂದರರಾಜನ್‌ ನೇತೃತ್ವದಲ್ಲಿ ಪ್ರಸ್ತುತ ಪಡಿಸಲ್ಪಟ್ಟ ಭರತನಾಟ್ಯದ ವಿವಿಧ ಭಂಗಿಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸಿತು.

ಗಣಪತಿ ಸ್ತುತಿಯೊಂದಿಗೆ ನೃತ್ಯ ಆರಂಭಿಸಿ ಪುಷ್ಪಾಂಜಲಿ ನೃತ್ಯ ಪ್ರಸ್ತುತಪಡಿಸಿದರು. ಶಿವಸ್ತುತಿಯನ್ನು ತಾಂ, ತಾಂ ಎನ್ನುತ್ತ ನೃತ್ಯ ಮಾಡುತ್ತ ಅಚ್ಚರಿಯ ರೀತಿಯಲ್ಲಿ ಹೆಜ್ಜೆಹಾಕಿ ಪ್ರೇಕ್ಷಕರಿಗೆ ಮುದ ನೀಡಿದರು. ನಂತರ ದಶಾವತಾರ, ಕೃಷ್ಣಾವತಾರದಲ್ಲಿ ಅದ್ಬುತವಾಗಿ ನೃತ್ಯ ಪ್ರದರ್ಶನ ನೀಡಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next