Advertisement

ಉಳ್ಳಾಲ ಸೇತುವೆಯಿಂದ ನದಿಗೆ ಹಾರಿದ ಯುವತಿ

09:10 AM Aug 10, 2019 | Hari Prasad |

ಉಳ್ಳಾಲ: ಇಲ್ಲಿನ ನೇತ್ರಾವತಿ ಸೇತುವೆಯಿಂದ ಯುವತಿಯೊಬ್ಬಳು ನದಿಗೆ ಹಾರಿದ ಘಟನೆ ಶುಕ್ರವಾರದಂದು ವರದಿಯಾಗಿದೆ. ನದಿಗೆ ಹಾರಿದ ಯುವತಿಯ ಹೆಸರು ನಿವೇದಿತಾ ಗಗನೇಶ್ವರಿ ಎಂದು ತಿಳಿದುಬಂದಿದೆ ಮತ್ತು ಈಕೆ ಪುತ್ತೂರಿನವರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

Advertisement

ಆದರೆ ಯಾವ ಕಾರಣದಿಂದ ಈಕೆ ಈ ರೀತಿಯಾಗಿ ಮಾಡಿಕೊಂಡಿದ್ದಾರೆ ಮತ್ತು ಇವರ ಜೊತೆಯಲ್ಲಿ ಇನ್ಯಾರಾದರೂ ಇದ್ದರೇ ಎಂಬ ಕುರಿತಾಗಿ ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.

ವಿಷಯ ತಿಳಿದು ಶಾಸಕ ಯು.ಟಿ. ಖಾದರ್ ಅವರು ಘಟನಾ ಸ್ಥಳಕ್ಕೆ ಧಾವಿಸಿ ಘಟನೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಪೊಲೀಸರು ಆಗಮಿಸಿ ಸಂಚಾರ ನಿಯಂತ್ರಣ ಮತ್ತು ಮುಂದಿನ ಕ್ರಮಗಳ ಕುರಿತು ಕಾರ್ಯತತ್ಪರರಾಗಿದ್ದಾರೆ.


Advertisement

Udayavani is now on Telegram. Click here to join our channel and stay updated with the latest news.

Next