Advertisement

ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧ ಮರ ಕಳವು

10:29 AM Dec 17, 2021 | Team Udayavani |

ರಾಯಚೂರು: ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧದ ಮರವನ್ನು ರಾತ್ರೋರಾತ್ರಿ ಖದೀಮರು ಕಳವು ಮಾಡಿದ ಘಟನೆ ತಾಲೂಕಿನ ಕುಕನೂರು ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಸರ್ಕಾರಿ ಶಾಲೆ ಹಿಂಭಾಗದ ರಾಮಕ್ಕವ್ವ ದೇವಸ್ಥಾನ ಬಳಿ ಐದಾರು ವರ್ಷದ ಶ್ರೀಗಂಧ ಮರ ಬೆಳೆದಿತ್ತು. ಇದನ್ನು ಗಮನಿಸಿದ ಖದೀಮರು ಗುರುವಾರ ತಡರಾತ್ರಿ ಯಾರು ಇಲ್ಲದ ವೇಳೆ ಕತ್ತರಿಸಿಕೊಂಡು ಹೋಗಿದ್ದಾರೆ. ಬೇರು ಸಮೇತ ಮರವನ್ನು ಕತ್ತರಿಸಿದ್ದು, ರೆಂಬೆಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ಸುತ್ತಮುತ್ತಲಿನ ಜಮೀನುಗಳಲ್ಲಿ ಈ ಹಿಂದೆ ಕೂಡ ಇಂಥ ಘಟನೆಗಳು ಮರುಕಳಿಸುತ್ತಲೆ ಇವೆ.  ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next