Advertisement

ಒಡಲಿನಲ್ಲಿ ನದಿಗಳಿದ್ದರೂ ಜನರಿಗೆ ನೀರಿಲ್ಲ

03:04 PM Oct 14, 2020 | Suhan S |

ಹುಣಸೂರು: ನಗರದ ಮಧ್ಯದಲ್ಲೇ ಲಕ್ಷ್ಮಣ ತೀರ್ಥ ನದಿ ಹರಿಯುತ್ತಿದ್ದರೂ ನಾಗರಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಹುಣಸೂರು ಸುತ್ತಮತ್ತ ಸಾಕಷ್ಟ ಜಲಮೂಲಗಳಿದ್ದು, ಇವುಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು ನಗರಕ್ಕೆ ಸುಲಭವಾಗಿ ನೀರು ಪೂರೈಸಬಹುದಾಗಿದೆ. ಆದರೆ, ಇವುಗಳನ್ನು ಸರಿಯಾಗಿ ಬಳಸಿಕೊಳ್ಳದ ಕಾರಣ ನಗರದ ನಾಗರಿಕರು ಕುಡಿಯುವ ನೀರಿಗಾಗಿ ಪರಿತಪಿಸುವುದು ಸಾಮಾನ್ಯವಾಗಿದೆ.

Advertisement

ನಗರಕ್ಕೆ ಈ ಹಿಂದಿನಿಂದಲೂ ಲಕ್ಷ್ಮಣ ತೀರ್ಥನದಿಯಿಂದಲೇ ನೀರು ಪೂರೈಕೆ ಮಾಡಲಾಗುತ್ತಿತ್ತು. ಇದಕ್ಕಾಗಿಯೇ ಪಂಪ್‌ ಹೌಸ್‌ ನಿರ್ಮಿಸಲಾಗಿದೆ. ಆಗ ಜನತೆಗೆ ಸಮರ್ಪಕವಾಗಿ ನೀರು ಸಿಗುತ್ತಿತ್ತು. ಈ ನಡುವೆ, ಜಿ.ಟಿ. ದೇವೇಗೌಡರು ಶಾಸಕರಾಗಿದ್ದ ಅವಧಿಯಲ್ಲಿ ಅಂದರೆ 2008ರಲ್ಲಿ ಕೆ.ಆರ್‌.ನಗರದ ಚಂದಗಾಲು ಬಳಿಯಿಂದ ಕಾವೇರಿ ನೀರನ್ನು ನಗರಕ್ಕೆ ಪೂರೈಸುವ ವ್ಯವಸ್ಥೆಯನ್ನು ಮಾಡಲಾಯಿತು. 2008ರಿಂದಲೂ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸಾಕಷ್ಟು ನೀರುಅಲ್ಲಿಂದಲೇ ಪೂರೈಕೆಯಾಗುತ್ತಿದ್ದರಿಂದ ಯಾವುದೇ ಸಮಸ್ಯೆ ಉಂಟಾಗುತ್ತಿರಲಿಲ್ಲ.

ಹೀಗಾಗಿ ಲಕ್ಷ್ಮಣ ತೀರ್ಥ ನದಿ ನೀರನ್ನು ಸ್ಥಗಿತಗೊಳಿಸಲಾಯಿತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹುಣಸೂರು ನಗರ ಶರವೇಗದಲ್ಲಿ ಬೆಳೆಯುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಹೊಸಬಡಾವಣೆಗಳು ನಿರ್ಮಾಣಗೊಂಡಿವೆ. ಹೀಗಾಗಿ ನಗರದ ಜನತೆಗೆ ಕಾವೇರಿ ನೀರು ಸಾಕಾಗುತ್ತಿಲ್ಲ. ಈ ಮಧ್ಯೆ, ನಗರದಲ್ಲಿ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆಸಿ, ನೀರು ಪೂರೈಸಲಾಗುತ್ತಿದ್ದರೂ ಜನರಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಹೀಗಾಗಿ ಸಾರ್ವಜನಿಕರು ರೋಸಿ ಹೋಗಿದ್ದಾರೆ.

ಅವ್ಯವಸ್ಥೆ: ಹುಣಸೂರು ಒಡಲಿನಲ್ಲಿ ಕಾವೇರಿ ನದಿ, ಲಕ್ಷ್ಮಣ ತೀರ್ಥ ನದಿ, 65ಕ್ಕೂ ಹೆಚ್ಚು ಬೋರ್‌ವೆಲ್‌ಗಳಿದ್ದರೂ ನಗರದ ಐದು ಸಾವಿರ ಮನೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿಲ್ಲ. ದೃರದೃಷ್ಟಿ ಯೋಜನೆಗಳುಇಲ್ಲದಕಾರಣಈ ಅವ್ಯವಸ್ಥೆ ಉಂಟಾಗಿದೆ.

ನೀರು ಸಿಗದ ಬಡಾವಣೆಗಳು: ನಗರದ ಮಂಜುನಾಥ ಬಡಾಣೆ, ನ್ಯೂ ಮಾರುತಿ ಬಡಾವಣೆ, ಒಂಟೆಪಾಳ್ಯ ಬೋರೆ, ಸ್ಟೋರ್‌ ಬೀದಿಯ ಕೆಲ ರಸ್ತೆ, ಬ್ರಾಹ್ಮಣರ ‌ ಬಡಾವಣೆಯ ರಾಘವೇಂದ್ರಸ್ವಾಮಿ ಮಠದ ರಸ್ತೆಯ ಮನೆಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ, ಹತ್ತಿರದ ‌ಬೋರ್‌ವೆಲ್‌ಗ‌ಳು ಇಲ್ಲವೇ ನಗರಸಭೆಯವರು ಸರಬರಾಜು ಮಾಡುವ  ಟ್ಯಾಂಕರ್‌ ನೀರಿಗಾಗಿ ಕಾಯಬೇಕಾದ ಪರಿಸಿ §ತಿ ನಿರ್ಮಾಣವಾಗಿದೆ. ಬಡಾವಣೆಗಳಿಗೆ ನೀರು ಪೂರೈಕೆಯಾಗದಿರುವ ಕುರಿತು ವಾಟರ್‌ಮ್ಯಾನ್‌ (ನೀರುಗಂಟಿ)ಗಳನ್ನು ಪ್ರಶ್ನಿಸಿದರೆ, ಪೈಪ್‌ಲೈನ್‌, ವಾಲ್ಟ್ ಹಾಳಾಗಿದೆ, ಕೆ.ಆರ್‌.ನಗರದಲ್ಲಿ ಮೋಟಾರ್‌ ಕೆಟ್ಟಿದೆ ಎಂದು ಸಬೂಬು ಹೇಳುತ್ತಾರೆ. ಇನ್ನೂ ನಗರಸಭೆ ಪೌರಾಯುಕ್ತರನ್ನು ಕೇಳಿದರೆ, ದುರಸ್ತಿಪಡಿಸಲಾಗುತ್ತಿದೆ. ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಸಿದ್ಧ ಉತ್ತರ ದೊರೆಯುತ್ತಿದೆ. ಹೀಗಾಗಿ ನಗರದ ‌ ಜನತೆ ಯಾರ ಬಳಿ ತಮ್ಮ ಸಮಸ್ಯೆಗ‌ಳನ್ನು ಹೇಳಿಕೊಳ್ಳಬೇಕು ಎಂಬುದೇ ತೋಚದಂತಾಗಿದೆ.

Advertisement

ಏನಂತಾರೆ ಶಾಸಕರು? :  ಹುಣಸೂರು ನಗರಕ್ಕೆಲಕ್ಷ್ಮಣತೀರ್ಥ ನದಿಯಿಂದ ನೀರು ಒದಗಿಸುತ್ತಿದ್ದ ಪಂಪ್‌ಹೌಸ್‌ ಪುನಶ್ಚೇತನಗೊಳಿಸಲು  ಸೂಚಿಸಲಾಗಿದೆ.ಅಲ್ಲದೇ ಕಾವೇರಿನದಿಯಿಂದ ನೀರುಸರಬರಾಜುಮಾಡುವಕೆ.ಆರ್‌.ನಗರ ತಾಲೂಕಿನಚಂದಗಾಲುಬಳಿಯಪಂಪ್‌ ಹೌಸ್‌ನಲ್ಲಿ ಹೆಚ್ಚಿನ ಸಾಮರ್ಥ್ಯದ ಮೋಟಾರ್‌ ಅಳವಡಿಸಲು ಹಾಗೂ ನಗರದಲ್ಲಿ ಮೂರು ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲು ನಿಟ್ಟಿನಲ್ಲಿ ಟೆಂಡರ್‌ ಪ್ರಗತಿಯಲ್ಲಿದೆ.ಈ ಎಲ್ಲಾ ಕಾಮಗಾರಿ ಪೂರ್ಣಗೊಂಡರೆ ನಗರದ ನೀರಿನ ಸಮಸ್ಯೆ ನೀಗಲಿದೆ ಎಂದು ಶಾಸಕ ಎಚ್‌.ಪಿ. ಮಂಜುನಾಥ್‌ ತಿಳಿಸಿದ್ದಾರೆ.

 

ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next