Advertisement

ಜಿಲ್ಲೆಯಲ್ಲಿ ನೀರಿನ ಕೊರತೆ: ಶಾಲಾರಂಭಕ್ಕೆ ಸಂಕಷ್ಟ

01:49 AM May 16, 2019 | Sriram |

ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಈ ನಡುವೆ ಪಿಯುಸಿ ತರಗತಿ ಇನ್ನೇನು ಕೆಲವೇ ದಿನ ಗಳಲ್ಲಿ ಆರಂಭವಾಗಲಿದೆ. ನೀರಿನ ಕೊರತೆ ಶಾಲಾರಂಭಕ್ಕೂ ಸಂಕಷ್ಟ ಒಡ್ಡಲಿದೆ.

Advertisement

ಪಿಯುಸಿ ತರಗತಿಗಳು ಮೇ 20ರಿಂದ ಆರಂಭಗೊಳ್ಳಲಿದ್ದು, ಜಿಲ್ಲೆಗೆ ವಿವಿಧ ಭಾಗಗಳ ಸಾವಿರಾರು ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಿಗೆ ಆಗಮಿಸಲಿದ್ದಾರೆ. ಸದ್ಯ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಕಾಲೇಜು ಆರಂಭವಾದರೆ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಈ ಹಿನ್ನೆಲೆಯಲ್ಲಿ ಪಿಯುಸಿ ಡಿಡಿಪಿಐ ಅವರು ಜಿಲ್ಲೆಯ ಕಾಲೇಜುಗಳಲ್ಲಿ ಇರುವ ನೀರಿನ ಸಮಸ್ಯೆಯ ಗಂಭೀರತೆ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.

ಕೆಲವು ಸರಕಾರಿ ಹಾಗೂ ಖಾಸಗಿ ಶಾಲಾ- ಕಾಲೇಜುಗಳಲ್ಲಿ ಸ್ವಂತ ಬಾವಿ, ಕೊಳವೆ ಬಾವಿ ವ್ಯವಸ್ಥೆಗಳಿಲ್ಲದೆ ಇರುವುದರಿಂದ ನಳ್ಳಿ ನೀರನ್ನೇ ಅವಲಂಬಿಸಲಾಗಿದೆ. ಸ್ವಂತ ಬಾವಿ, ಕೊಳವೆ ಬಾವಿ ಇರುವ ಶಾಲಾ ಕಾಲೇಜುಗಳಲ್ಲೂ ನೀರು ಬತ್ತಿಹೋಗುತ್ತಿದೆ.

ಕಾಲೇಜುಗಳು ಮೇ 20ರಂದು ಆರಂಭವಾದರೆ ಕುಡಿಯುವ ನೀರು ಮಾತ್ರವಲ್ಲ ಶೌಚಾಲಯ, ಕೈ ತೊಳೆಯುವುದು ಸೇರಿದಂತೆ ಇನ್ನಿತರ ಬಳಕೆಗಾಗಿ ಸಾವಿರಾರು ಲೀಟರ್‌ ನೀರು ಬೇಕಾಗುತ್ತದೆ. ಈ ಸಮಸ್ಯೆಯನ್ನು ಬಗ್ಗೆ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ದ.ಕ. ಡಿಡಿಪಿಐ ಕುಶಾಲಾರತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next