Advertisement

ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ !

10:27 AM Feb 29, 2020 | mahesh |

ಉಡುಪಿ: ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ 13 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಾಗದೆ ಮಕ್ಕಳ ಕ್ರೀಡಾ ಚಟುವಟಿಕೆ ಕುಂಠಿತ ಗೊಂಡಿದೆ. ವೃಂದ ನೇಮಕಾತಿ ಬದಲಾವಣೆಯಲ್ಲಿ ನಿರ್ಲಕ್ಷ್ಯ, ವೈದ್ಯನಾಥನ್‌ ವರದಿಯ ಶಿಫಾರಸುಗಳನ್ನು ಪೂರ್ಣ ಅನು ಷ್ಠಾನಕ್ಕೆ ತಾರದಿರುವುದೇ ನೇಮಕಾತಿಯಾಗದಿರಲು ಪ್ರಮುಖ ಕಾರಣ. ಇದರಿಂದ ಉದ್ಯೋಗ ನಿರೀಕ್ಷೆಯಲ್ಲಿರುವ ಸಿಪಿಎಡ್‌, ಡಿಪಿಎಡ್‌ ಅಭ್ಯರ್ಥಿಗಳ ಭವಿಷ್ಯವೂ ಕತ್ತಲಲ್ಲಿದೆ. ರಾಜ್ಯದಲ್ಲಿ 29 ಸಾವಿರ ಸರಕಾರಿ ಪ್ರಾ. ಶಾಲೆಗಳಿವೆ. ಅವುಗಳ ಪೈಕಿ 3,500 ಶಾಲೆಗಳಲ್ಲಿ ಮಾತ್ರ ದೈ.ಶಿ. ಶಿಕ್ಷಕರಿದ್ದಾರೆ. ಇದಕ್ಕೆ ಹೋಲಿಸಿದರೆ ಪ್ರೌಢ ಶಾಲೆಗಳ ಸ್ಥಿತಿ ಪರವಾಗಿಲ್ಲ; 4,350 ಶಾಲೆಗಳ ಪೈಕಿ 3,950ರಷ್ಟು ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ.

Advertisement

ಮಕ್ಕಳಿಲ್ಲದಿರುವುದೂ ಅಡ್ಡಿ
ಸರಕಾರಿ ಶಾಲೆಗೆ ಮಕ್ಕಳ ದಾಖಲಾತಿ ಕಡಿಮೆಯಾದ ಹಿನ್ನೆಲೆ ಯಲ್ಲಿ 200ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಮಾತ್ರ ದೈಹಿಕ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಬಹುತೇಕ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ದೈ.ಶಿ. ಶಿಕ್ಷಕರ ಕೊರತೆ ಗಣನೀಯವಾಗಿದೆ.
ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಒತ್ತು ನೀಡಬೇಕಾದ ಕ್ರೀಡಾ ಚಟುವಟಿಕೆಗಳು ನಿರ್ಲಕ್ಷ್ಯಕ್ಕೆ ಈಡಾಗುತ್ತಿವೆ ಎಂಬುದು ಪೋಷಕರ ಅಳಲು. ಮಕ್ಕಳು ಕಡಿಮೆ ಇದ್ದರೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಬೇಕು ಎಂಬುದು ಅವರ ಆಗ್ರಹ. ಸರಕಾರವು ಸರಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿರುವಂತೆ ದೈ.ಶಿ. ಶಿಕ್ಷಕರನ್ನು ನೇಮಿಸಬೇಕು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next