Advertisement

ಉದ್ಯೋಗವಕಾಶವಿದೆ ಆದರೆ ಉತ್ತರ ಭಾರತೀಯರಲ್ಲಿ ಸಾಮರ್ಥ್ಯದ ಕೊರತೆಯಿದೆ: ಕೇಂದ್ರ ಸಚಿವ ಗಂಗ್ವಾರ್

09:33 AM Sep 16, 2019 | keerthan |

ಹೊಸದಿಲ್ಲಿ: ದೇಶದಲ್ಲಿ ಉದ್ಯೋಗವಕಾಶ ವಿಫುಲವಾಗಿದೆ ಆದರೆ ಉತ್ತರ ಭಾರತೀಯರಲ್ಲಿ ಉದ್ಯೋಗದ ಕೌಶಲ ಮತ್ತು ಸಾಮರ್ಥ್ಯವಿಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಹೇಳಿಕೆ ನೀಡಿದ್ದಾರೆ.

Advertisement

ಕೇಂದ್ರ ಸರಕಾರದ 100ದಿನದ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲ ಎಂದರು. ದೇಶದಲ್ಲಿ ಆರ್ಥಿಕ ಹಿಂಜರಿತದ ಭಯವಿದ್ದರೂ ನಿರುದ್ಯೋಗ ಸಮಸ್ಯೆಯಿಲ್ಲ.  ವಿವಿಧ ವಿಭಾಗಗಳಲ್ಲಿ ಹಲವು ಕೆಲಸಗಳು ಇವೆ. ಆದರೆ ಕೌಶಲ ಮತ್ತು ಸಾಮರ್ಥ್ಯದ ಕೊರತೆಯಿಂದಾಗಿ ಉದ್ಯೋಗ ದೊರಕುತ್ತಿಲ್ಲ ಎಂದು ಕೇಂದ್ರ ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next