Advertisement

500 ಪ್ರಯಾಣಿಕರಿಗೆ ನಾಲ್ಕೈದು ಬಸ್‌ ಸಾಕಾಗುತ್ತಾ?

03:00 PM Jan 10, 2020 | Team Udayavani |

ಕೆ.ಆರ್‌.ನಗರ: ಪಟ್ಟಣದಿಂದ ಮೈಸೂರಿಗೆ ತೆರಳುವ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ನಿಲ್ದಾಣದಲ್ಲಿ ಸಕಾಲದಲ್ಲಿ ಬಸ್‌ ಸಿಗದ ಕಾರಣ ಪ್ರತಿ ದಿನ ಕಿರಿಕಿರಿ ಅನುಭವಿಸುವಂತಾಗಿದೆ. ಬೆಳಗ್ಗೆ 6 ಗಂಟೆಗೆ ನಿಲ್ದಾಣದಲ್ಲಿ 500 ಕ್ಕೂ ಅಧಿಕ ಪ್ರಯಾಣಿಕರು ಇರುತ್ತಾರೆ. ಈ ವೇಳೆ ಮೈಸೂರಿಗೆ ತೆರಳಲು ಬಂದರೆ ಬರುವ ನಾಲ್ಕೈದು ಬಸ್‌ಗಳಲ್ಲಿ ಸೀಟು ಹಿಡಿಯಲು ಹರಸಾಹಸ ಮಾಡ ಬೇಕು. ಇದ ರಿಂದ ವಿದ್ಯಾರ್ಥಿಗಳು ಸಕಾಲದಲ್ಲಿ ಶಾಲಾ ಕಾಲೇಜು ತೆರಳಲು ಆಗುತ್ತಿಲ್ಲ. ಮಹಿಳೆಯರು, ವೃದ್ಧರ ಸಮಸ್ಯೆ ಹೇಳತೀರದಾಗಿದೆ.

Advertisement

ಕೆ.ಆರ್‌.ನಗರದಿಂದ ಮೈಸೂರಿಗೆ ತೆರಳಬೇಕಾದರೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ನರಕ ಯಾತನೆ ಅನುಭವಿಸುವಂತಾಗಿದ್ದು, ಸಮಸ್ಯೆಯ ಅರಿವಿದ್ದರೂ ಚುನಾಯಿತ ಜನಪ್ರತಿ ನಿಧಿಗಳು ಮತ್ತು ಇಲಾಖೆಯ ಅಧಿಕಾರಿ ಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಬಸ್‌ ಸಮಸ್ಯೆಯಿಂದ ವಿದ್ಯಾರ್ಥಿಗಳು ನಿತ್ಯ ಮೈಸೂರಿಗೆ ಸಂಚರಿಸಲು ತೊಂದರೆ ಅನುಭವಿಸುತ್ತಿರುವುದರ ಜತೆಗೆ ಪುಟ್ಟ ಮಕ್ಕಳನ್ನು ಜೊತೆಯಲ್ಲಿ ಕರೆ ತರುವ ಪ್ರಯಾಣಿಕರ ಸ್ಥಿತಿ ಹೇಳತೀರದಾಗಿದೆ.

ಮಧ್ಯಾಹ್ನದ ತನಕ 12 ಬಸ್‌ ಮಾತ್ರ: ಬೆಳಗ್ಗೆಯಿಂದ 12 ಗಂಟೆಯವರೆಗೆ ಕೆ.ಆರ್‌.ನಗರ ಘಟಕದಿಂದ 12 ಬಸ್‌ಗಳು ಮಾತ್ರ ಮೈಸೂರಿಗೆ ಸಂಚರಿಸುತ್ತವೆ. ಉಳಿ ದಂತೆ ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ, ರಾಮನಾಥಪುರ ಸೇರಿದಂತೆ ಇತರಘಟಕಗಳಿಂದ ಬರುವ ಬಸ್‌ಗಳಲ್ಲಿ ಸ್ಥಳಾವಕಾಶವೇ ಇರುವುದಿಲ್ಲ.

ಮನವಿಗೆ ಸ್ಪಂದನೆಯಿಲ್ಲ: ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇಲಾಖೆಯ ಅಧಿಕಾರಿಗಳಿಗೆ ಹತ್ತಾರು ಬಾರಿ ಲಿಖೀತವಾಗಿ ದೂರು ನೀಡುವುದರ ಜತೆಗೆ ವಿವಿಧ ಸಂಘಟನೆಗಳವರು ಕೆ.ಆರ್‌.ನಗರ ದಿಂದ ಮೈಸೂರಿಗೆ ತೆರಳಲು ಬೆಳಿಗ್ಗೆ 6 ಗಂಟೆಯಿಂದ 12ರವರೆಗೆ ಅಗತ್ಯ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ವಿದ್ಯಾರ್ಥಿಗಳ ಕಂಡರೆ ಅಸಡ್ಡೆ: ಈ ಸಮಸ್ಯೆಯ ಜತೆಗೆ ನಿರ್ವಾ ಹಕರು ಶಾಲಾ-ಕಾಲೇಜುಗಳಿಗೆ ತೆರಳಲು ಬರುವ ವಿದ್ಯಾರ್ಥಿಗಳ ಬಗ್ಗೆ ಅಸಡ್ಡೆ ತೋರು ತ್ತಿದ್ದು, ಸುಗಮ ಬಸ್‌ ವ್ಯವಸ್ಥೆ ಇಲ್ಲದೇ ಪರಿ ತಪಿಸುವ ಅವರು ಸಾರಿಗೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೂ ಒಳಗಾಗುತ್ತಿದ್ದು, ಈ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸಬೇಕಿದೆ. ಬಸ್‌ ನಿಲ್ದಾಣ ದಲ್ಲಿ ಕಾಯ ìನಿರ್ವಹಿಸುವ ಸಂಚಾರ ನಿಯಂತ್ರಕರ ಬಳಿ ಸಮಸ್ಯೆ ಹೇಳಿಕೊಂಡರೆ ಬೇಜವಾಬ್ದಾರಿ ಉತ್ತರ ನೀಡುವ ಅವರು ಕೆಲವು ಸಾರಿ ಪ್ರಯಾಣಿಕರ ಜತೆ ವಾಗ್ವಾದಕ್ಕಿಳಿಯುತ್ತಾರೆ ಎಂಬ ದೂರುಗಳಿವೆ. ಶಾಸಕ ಸಾ.ರಾ.ಮಹೇಶ್‌ ಈ ಬಗ್ಗೆ ಗಮನ ಹರಿಸಿ ಸಾರಿಗೆ ಅದಾಲತ್‌ ನಡೆಸುವುದರೊಂ ದಿಗೆ ಪ್ರಯಾಣಿಕರ ಅನುಕೂಲಕ್ಕೆ ಬರಬೇಕೆಂ ಬುದು ನಾಗರಿಕರ ಒತ್ತಾಯವಾಗಿದೆ.

Advertisement

ಡಿಪೋ ಮ್ಯಾನೇಜರ್‌ ಏನಂತಾರೆ? :  ಕೆ.ಆರ್‌.ನಗರ ಬಸ್‌ ಘಟಕದ ವತಿಯಿಂದ ಬೆಳಗ್ಗೆ 6 ಗಂಟೆಯಿಂದ 12ರವರೆಗೆ 12 ಬಸ್‌ಗಳು ಸಂಚಾರ ಮಾಡುತ್ತಿದ್ದು, ನಾವು ಪ್ರಯಾಣಿಕರಿಗೆ ಸಾಧ್ಯವಾದಷ್ಟು ಅನುಕೂಲ ಮಾಡಲು ಕ್ರಮ ಕೈಗೊಂಡಿದ್ದು, ಪ್ರಸ್ತುತ ಇರುವ ಸಮಸ್ಯೆಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಇದರಿಂದ ನಮಗೆ ಮತ್ತೆ ಮೂರು ಬಸ್ಸುಗಳನ್ನು ಸಂಚಾರಕ್ಕೆ ಹೆಚ್ಚುವರಿಯಾಗಿ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಒತ್ತಡ ಕಡಿಮೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಕೆ.ಆರ್‌.ನಗರ ಡಿಪೋ ವ್ಯವಸ್ಥಾಪಕ ಪಾಪನಾಯಕ ತಿಳಿಸಿದ್ದಾರೆ.

ಪಟ್ಟಣದಿಂದ ಬೆಳಗಿನ ವೇಳೆ ಮೈಸೂರಿಗೆ ತೆರಳಲು ನಿತ್ಯ ಹಿಂಸೆ ಅನುಭಿಸುವಂತಾಗಿದೆ. ಬಸ್‌ ಅವ್ಯವಸ್ಥೆ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅರಿವಿದ್ದರೂ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ಸಂಬಂಧಪಟ್ಟವರು ಶೀಘ್ರ ಸಮರ್ಪಕ ಬಸ್‌ ವ್ಯವಸ್ಥೆ ಕಲ್ಪಿಸಬೇಕು.  – ಬಸವರಾಜು, ಕೆಂಪನಕೊಪ್ಪಲು

ಶಾಸಕರೇ, ಬೆಳಗ್ಗೆ ವೇಳೆ ಬಸ್‌ ವ್ಯವಸ್ಥೆ  ಕಲ್ಪಿಸಿ :  ಪಟ್ಟಣದ ಕೆಎಸಾರ್ಟಸಿ ಬಸ್‌ ನಿಲ್ದಾಣದಲ್ಲಿ ಬೆಳಗಿನ ವೇಳೆ ಪ್ರಯಾಣಿಕರು ಮೈಸೂರಿಗೆ ತೆರಳಲು ಕಿಕ್ಕಿರಿದು ತುಂಬಿರುತ್ತಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 500-600 ಪ್ರಯಾಣಿಕರು ಸೇರಿರುತ್ತಾರೆ. ಈ ವೇಳೆ ಕೇವಲ ನಾಲ್ಕೈದು ಬಸ್‌ಗಳು ಮಾತ್ರ ಬರುತ್ತವೆ. ಇಷ್ಟು ಮಂದಿ ಪ್ರಯಾಣಿಕರಿಗೆ ಈ ಬಸ್‌ಗಳು ಯಾವುದಕ್ಕೂ ಸಾಲುವುದಿಲ್ಲ. ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಕೇವಲ 12 ಬಸ್‌ ಮಾತ್ರ ನಿಲ್ದಾಣದಿಂದ ತೆರಳುತ್ತವೆ. ಈ ಸಮಯದಲ್ಲಿ ಇನ್ನಷ್ಟು ಬಸ್‌ಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕಿದೆ. ಕ್ಷೇತ್ರದ ಶಾಸಕರಾದ ಸಾ.ರಾ.ಮಹೇಶ್‌ ಈ ಕುರಿತು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕಿದೆ.

 

  –ಗೇರದಡ ನಾಗಣ್ಣ

Advertisement

Udayavani is now on Telegram. Click here to join our channel and stay updated with the latest news.

Next