Advertisement

KSRTC: ಧರ್ಮಸ್ಥಳಕ್ಕೆ ಬಸ್‌ ಕೊರತೆ- ಮಧ್ಯರಾತ್ರಿ ಪ್ರತಿಭಟನೆ

11:46 PM Dec 10, 2023 | Team Udayavani |

ಚಿಕ್ಕಮಗಳೂರು: ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಅಭಾವದಿಂದ ಪ್ರಯಾಣಿಕರು ಬಸ್‌ ನಿಲ್ದಾಣದಲ್ಲೇ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್‌ ವ್ಯವಸ್ತೆ ಮಾಡುವಂತೆ ಆಗ್ರಹಿಸಿ ಪ್ರಯಾಣಿಕರು ಮಧ್ಯರಾತ್ರಿ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

Advertisement

ಬಸ್‌ ಕೊರತೆಯಿಂದ ಧರ್ಮಸ್ಥಳಕ್ಕೆ ತೆರಳಲು ಸಾಧ್ಯವಾಗದ ಪ್ರಯಾಣಿಕರು ರಾತ್ರಿ ಕಡೂರು ಮತ್ತು ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಧರ್ಮಸ್ಥಳಕ್ಕೆ ತೆರಳಲು ನೂರಾರು ಪ್ರಯಾಣಿಕರು ನಗರಕ್ಕೆ ಆಗಮಿಸಿದ್ದು, ಆದರೆ ಬಸ್‌ ಇಲ್ಲದ ಕಾರಣ ಕೊರೆಯುವ ಚಳಿಯಲ್ಲಿಯೇ ಬಸ್‌ ನಿಲ್ದಾಣದಲ್ಲಿ ಮಲಗಿ ಕಾಲ ಕಳೆದರು. ಕೆಲವು ಪ್ರಯಾಣಿಕರು ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮೂಲಕ ಬಸ್‌ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.

ಧರ್ಮಸ್ಥಳ, ಮಂಗಳೂರು, ಉಡುಪಿಗೆ ತೆರಳುವ ಪ್ರಯಾಣಿಕರಿಗೆ ಬಸ್‌ ಕೊರತೆ ನಿತ್ಯದ ಗೋಳಾಗಿದೆ ಎಂದು ಪ್ರಯಾಣಿಕರು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next