Advertisement

ಹಾಸಿಗೆ ಕೊರತೆ: ಕಂಗಾಲಾದ ಸೋಂಕಿತರು

05:28 PM Apr 29, 2021 | Team Udayavani |

ತುಮಕೂರು: ಕಳೆದ ಒಂದು ವಾರದಿಂದ ಜ್ವರ, ತಲೆನೋವು ಗಂಟಲು ನೋವು ಇದೆ. ನನಗೆ ಕೊರೊನಾಪಾಸಿಟಿವ್‌ ಬಂದಿದೆ. ಪಲ್ಸ್‌ ರೈಟ್‌ ತುಂಬಾ ಕಡಿಮೆಇದೆ. ನನ್ನ ಲಂಗ್ಸ್‌ ಶೇ. 60ರಷ್ಟು ಡ್ಯಾಮೇಜ್‌ ಆಗಿದೆ.ಉಸಿರಾಟ ಸಮಸ್ಯೆ ಇದೆ. ಯಾವ ಆಸ್ಪತ್ರೆಗೆಹೋದರೂ ಬೆಡ್‌ ಇಲ್ಲ ಎನ್ನುತ್ತಿದ್ದಾರೆ.

Advertisement

ಬಡವರ ಕಷ್ಟಕೇಳುವವರು ಯಾರು ಸ್ವಾಮಿ?…ಇದು ಕೊರೊನಾದಿಂದ ಸಂಕಷ್ಟಪಡುತ್ತಿದ್ದಸೋಂಕಿತರೊಬ್ಬರು ಬಹಿರಂಗವಾಗಿ ಜಿಲ್ಲಾ ಆಸ್ಪತ್ರೆಯಆವರಣದಲ್ಲಿ ತನ್ನ ಅಳಲನ್ನು ತೋಡಿಕೊಂಡರೆ ಅವರಕುಟುಂಬದವರು ಸೋಂಕಿತರ ಸ್ಥಿತಿ ನೋಡಿ ಕಣ್ಣೀರುಹಾಕುತ್ತಿದ್ದದ್ದು ಎಂಥವರ ಕರಳು ಹಿಂಡುವಂತಿತ್ತು.

ಇದು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರನೋವಿನ ಕಥೆ. ಜಿಲ್ಲಾಡಳಿತ ಹೇಳುತ್ತಿದೆ ಹಾಸಿಗೆಕೊರತೆ ಇಲ್ಲ ಎಂದು ಆದರೆ, ಆಸ್ಪತ್ರೆಗಳಲ್ಲಿ ಹಾಸಿಗೆಇಲ್ಲ, ವೆಂಟಿಲೇಟರ್‌ ಇಲ್ಲ. ಆಮ್ಲಜನಕ ಕೊರತೆಯಿಂದಜಿಲ್ಲೆಯಲ್ಲಿ ಮೃತಪಡುತ್ತಿರುವ ಸೋಂಕಿತರ ಸಂಖ್ಯೆತೀವ್ರವಾಗಿಯೇ ಇದೆ.

ರೋಗಿಗಳ ಪರದಾಟ: ಯಾವುದೇ ಆಸ್ಪತ್ರೆಗೆಹೋದರೂ ಬೆಡ್‌ ಖಾಲಿ ಇಲ್ಲ, ಆಸ್ಪತ್ರೆಗಳಮುಂದೆಯೇ ಬೆಡ್‌ ಖಾಲಿ ಇಲ್ಲ ಎನ್ನುವ ಬೋರ್ಡ್‌.ತೀವ್ರ ಉಸಿರಾಟದಿಂದ ತೊಂದರೆ ಅನುಭವಿಸುತ್ತಿರುವರೋಗಿಗಳ ಪರದಾಟ ಹೇಳ ತೀರದಾಗಿದೆ. ಸುಡುಬಿಸಿಲ ಬೇಗೆಯ ನಡುವೆ ಜನರಲ್ಲಿ ಹೆಚ್ಚು ಭೀತಿಹುಟ್ಟಿಸುತ್ತಿರುವ ರೂಪಾಂತರಿ ಕೊರೊನಾ ವೈರಸ್‌.ಒಂದೇ ದಿನಕ್ಕೆ 1800 ರಿಂದ 1900 ರವರೆಗೆಕೊರೊನಾ ಸೋಂಕಿತರು ಪತ್ತೆ ಆಗುತ್ತಿರುವುದುಜಿಲ್ಲೆಯ ಜನರಲ್ಲಿ ಭಯ ಹುಟ್ಟುವಂತೆ ಮಾಡುತ್ತಿದೆ.

ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿಕೊರೊನಾ ಹೆಚ್ಚು ವ್ಯಾಪಿಸುತ್ತಿರುವ ಜಿಲ್ಲೆಗಳಲ್ಲಿ ರಾತ್ರಿಕರ್ಫ್ಯೂ ಜಾರಿ ಮಾಡಿತ್ತು, ವೀಕೆಂಡ್‌ ಲಾಕ್‌ಡೌನ್‌ಘೋಷಣೆ ಮಾಡಿತ್ತು. ಆದರೆ, ಜಿಲ್ಲೆಯಲ್ಲಿ ಮಾತ್ರಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತನ್ನ ಆರ್ಭಟವನ್ನುಹೆಚ್ಚಿಸಿಕೊಂಡಿರುವ ಕಿಲ್ಲರ್‌ ಕೊರೊನಾ ತುಮಕೂರುಜಿಲ್ಲೆಯಲ್ಲಿಯೂ ಮಹಾಮಾರಿಯಾಗಿ ತನ್ನ ಅಟ್ಟಹಾಸವನ್ನು ಕಡಿಮೆ ಮಾಡದೇ ಮುನ್ನುಗ್ಗುತ್ತಿದೆ. ಒಂದುದಿನಕ್ಕೆ 1308 ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜನರನ್ನು ಆತಂಕ ಪಡಿಸುತ್ತಿದ್ದು, ಇದನ್ನುಎದುರಿಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ.

Advertisement

ಪ್ರತಿದಿನ 7000 ಕೋವಿಡ್‌ ಪರೀಕ್ಷೆ: ಈಗಬರುತ್ತಿರುವ ಆರೋಗ್ಯ ಇಲಾಖೆಯ ಮಾಹಿತಿಪ್ರಕಾರ ಒಂದು ದಿನಕ್ಕೆ ಕನಿಷ್ಠ 1300 ರಿಂದ 1950ರಒಳಗೆ ಕೊರೊನಾ ಸೋಂಕಿತರು ಆಸ್ಪತ್ರೆಗೆದಾಖಲಾಗುತ್ತಿದ್ದಾರೆ. ಬುಧವಾರದವರೆಗೆ ಜಿಲ್ಲೆಯಲ್ಲಿಕೊರೊನಾ ಸೋಂಕಿತರು 41,856 ಇದ್ದು, ಇದೇ ರೀತಿಜಿಲ್ಲೆಯಲ್ಲಿ ಕೊರೊನಾ ತನ್ನ ವ್ಯಾಪ್ತಿಯನ್ನು ಹೆಚ್ಚುಮಾಡುತ್ತಾ ಹೋದರೆ ಮೇ ವೇಳೆಗೆ ಸೋಂಕಿತರು 60ಸಾವಿರ ಮೇಲಾಗುವ ಸಾಧ್ಯತೆ ಕಂಡು ಬಂದಿದೆ.

ಎಲ್ಲಕಡೆ ಕೊರೊನಾ ಪರೀಕ್ಷೆ ಮಾಡಿಸಲು ಜಿಲ್ಲಾಡಳಿತಕ್ರಮಕೈಗೊಂಡಿದೆ. ಒಂದು ದಿನಕ್ಕೆ 7000 ಕೋವಿಡ್‌ಪರೀಕ್ಷೆ ಮಾಡಲಾಗುತ್ತಿದೆ.ತುಮಕೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಹಿನ್ನೆಲೆ ಆಸ್ಪತ್ರೆಗಳ ಮುಂದೆ ಕೊರೊನಾ ಪರೀಕ್ಷೆಗೆ ಜನಸಾಲುಗಟ್ಟಿ ನಿಲ್ಲುತ್ತಿದ್ದಾರೆ ಜೊತೆಗೆ ಕೊರೊನಾಸೋಂಕಿತರು ಲ್ಯಾಬ್‌ ಗಳ ಮುಂದೆ ಶ್ವಾಸಕೋಶದ ಸಿಟಿಸ್ಕ್ಯಾನಿಂಗ್‌ ಮಾಡಿಸಲು ಕೊರೊನಾ ಪಾಸಿಟಿವ್‌ ಬಂದಿರುವವರು ಕಾಯುತ್ತಿರುವುದು ಸಾಮಾನ್ಯವಾಗಿದೆ.

ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ವಿಫ‌ಲ: ಕೊರೊನಾವೈರಸ್‌ ದಿನೇ ದಿನೆ ಹೆಚ್ಚಳವಾಗಿರುವ ಹಿನ್ನೆಲೆ ಜಿಲ್ಲಾಡಳಿತ ಅಗತ್ಯ ಕ್ರಮ ಗಳನ್ನು ಕೈಗೊಂಡಿದೆ. ಕೊರೊನಾಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾ ಕೇಂದ್ರತುಮಕೂರಿ ನಲ್ಲಿ 200 ಹಾಸಿಗೆಗಳು ಉಳಿದಂತೆಸಿದ್ಧಾರ್ಥ ಆಸ್ಪತ್ರೆಯಲ್ಲಿ 110 ಶ್ರೀದೇವಿ ಆಸ್ಪತ್ರೆಯಲ್ಲಿ125, ಸೂರ್ಯ ಆಸ್ಪತ್ರೆಯಲ್ಲಿ 30, ಪೃಥ್ವಿ ಆಸ್ಪತ್ರೆಯಲ್ಲಿ30 ಹಾಸಿಗೆಗಳು ಸೇರಿದಂತೆ ವಿವಿಧ ಆಸ್ಪತ್ರೆ ಕೋವಿಡ್‌ಆಸ್ಪತ್ರೆಯಂದು ಘೋಷಿಸಿದೆ. ಕಳೆದ ವರ್ಷಆರಂಭವಾಗಿದ್ದ ಅಶ್ವಿ‌ನಿ ಆಯುರ್ವೇದಿಕ್‌ ಆಸ್ಪತ್ರೆಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಇನ್ನು ಕೋವಿಡ್‌ರೋಗಿಗಳ ದಾಖಲಾತಿ ಆರಂಭವಾಗಿಲ್ಲ.

ಸೋಂಕಿತರುಹೆಚ್ಚಾದರೆ ಎಲ್ಲ ಕಡೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಅದುಈವರೆ‌ಗೂ ಸಾಧ್ಯವಾಗಿಲ್ಲ, ಅಲ್ಲದೆ ಪ್ರತಿ ತಾಲೂಕಿನಲ್ಲಿ50 ಹಾಸಿಗೆಗಳು ಲಭ್ಯವಿದೆ. ಸೋಂಕಿತರ ಸಂಖ್ಯೆಗೆಅನುಗುಣವಾಗಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತಸಿದ್ಧವಾಗಿದೆ. ಆದರೆ, ರೋಗಿಗಳ ಸಂಖ್ಯಾ ವೇಗಕ್ಕೆಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತದಿಂದ ಆಗುತ್ತಿಲ್ಲ.

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next