Advertisement

Uppinangady ಸಿಡಿಲು: 2 ಮನೆಗೆ ಹಾನಿ; ಒಬ್ಬರಿಗೆ ಗಾಯ

11:38 PM Jun 05, 2024 | Team Udayavani |

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಅಡೇಕಲ್‌ ಪೆರಾಬೆಯಲ್ಲಿ ಜೂ. 5ರಂದು ಮಧ್ಯಾಹ್ನ ಸಿಡಿಲು ಬಡಿದು 2 ಮನೆಗಳು ಭಾಗಶಃ ಹಾನಿಗೀಡಾಗಿವೆ. ಮನೆಯೊಂದರ ಮಾಲಕ ಗಾಯಗೊಂಡಿದ್ದು, ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಪೆರಾಬೆಯ ನಿವಾಸಿ ಬಿ.ಟಿ. ಸುಲೈಮಾನ್‌ ಅವರ ಪುತ್ರ ಬಿ.ಟಿ. ಸಂಶುದ್ದೀನ್‌ ಮತ್ತು ಸಹೋದರ ಬಿ.ಟಿ. ಕರೀಂ ಅವರ ಮನೆಗೆ ಸಿಡಿಲು ಬಡಿದಿದೆ. ಮನೆಯ ಒಳಗಿದ್ದ ಸಂಶುದ್ದೀನ್‌ ಅವರಿಗೆ ಸಿಡಿಲು ಬಡಿದು ಕೈಗಳಿಗೆ ಗಾಯವಾಗಿದೆ. ಇನ್ನೊಂದು ಕೊಠಡಿಯಲ್ಲಿದ್ದ ಅವರ ತಾಯಿ, ಪತ್ನಿ ಮತ್ತು ಈರ್ವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂದರ್ಭ ಬಿ.ಟಿ. ಕರೀಂ ಮನೆಯಲ್ಲಿ ಯಾರೂ ಇರಲಿಲ್ಲ.

ಸಂಶುದ್ದೀನ್‌ ಮನೆಯ ಗೋಡೆ ಮತ್ತು ನೆಲ ಬಿರುಕು ಬಿಟ್ಟಿದೆ. ವಿದ್ಯುತ್‌ ವೈರಿಂಗ್‌ ಸುಟ್ಟಿದೆ. ಕರೀಂ ಮನೆಯಲ್ಲಿಯೂ ಹಾನಿ ಸಂಭವಿಸಿದೆ.

ಗೃಹಪ್ರವೇಶ ನಡೆದ ದಿನವೇ ಅವಘಡ
ಸಂಶುದ್ದೀನ್‌ ಅವರು ಹೊಸದಾಗಿ ಮನೆ ನಿರ್ಮಿಸಿದ್ದು, ಸರಳ ರೀತಿಯಲ್ಲಿ ಜೂ. 5ರಂದು ಬೆಳಗ್ಗೆ ಗೃಹಪ್ರವೇಶ ಮಾಡಿದ್ದರು. ಅದೇ ದಿನ ಸಂಭವಿಸಿದ ಅವಘಡದಿಂದ ಮನೆಯವರು ಆಘಾತಕ್ಕೆ ಒಳಗಾಗಿದ್ದಾರೆ.

ಸಿಡಿಲು ಬಡಿದು ದನ ಸಾವು
ಬೆಳ್ತಂಗಡಿ: ತಾಲೂಕಿನ ಕೊಯ್ಯೂರು ಗ್ರಾಮದ ಕೊಪ್ಪದಬೈಲಿನ ನಿವಾಸಿ ಬೇಬಿ ಪೂಜಾರಿ ಅವರ ದನದ ಹಟ್ಟಿಗೆ ರವಿವಾರ ಸಂಜೆ ಸಿಡಿಲು ಬಡಿದು ದನವೊಂದು ಸಾವನ್ನಪ್ಪಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next