Advertisement

ಜನರ ಸೇವೆಗೆ ಪಕ್ಷಾತೀತವಾಗಿ ಶ್ರಮ: ಪಾಟೀಲ

08:40 PM Jul 13, 2021 | Girisha |

ಇಂಡಿ: ಇಂಡಿ ಕ್ಷೇತ್ರದ ಅಭಿವೃ ದ್ಧಿಗೆ ಕಾಂಗ್ರೆಸ್‌ ಸರಕಾರದ ಆಡಳಿತಾವ ಧಿಯಲ್ಲಿ ಮೂರು ಸಾವಿರ ಕೋಟಿಗೂ ಹೆಚ್ಚು ಅನುದಾನ ಹರಿದು ಬಂದಿದೆ. ಕ್ಷೇತ್ರದ ಜನ ನನ್ನ ಮೇಲೆ ನಂಬಿಕೆ ಇಟ್ಟು ಎರಡು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಕ್ಕೆ ಜನರ ಋಣ ತೀರಿಸುವ ಕಾರ್ಯ ಮಾಡಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಸೋಮವಾರ ಕೆಯುಐಡಿಎಫ್‌ ಸಾಲ ಹಾಗೂ ಪುರಸಭೆ ವಂತಿಕೆ ಅನುದಾನದಡಿ 30 ಕೋಟಿ ರೂ. ವೆಚ್ಚದಲ್ಲಿ ಕಟ್ಟಲ್ಪಡುವ ಮೆಗಾ ಮಾರ್ಕೆಟ್‌ ಮೊದಲನೇ ಹಂತದ ನಿರ್ಮಾಣದ ಭೂಮಿಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಮಾತ್ರ ಒಂದು ತಿಂಗಳು ಪಕ್ಷದ ಕುರಿತು ಕೆಲಸ ಮಾಡೋಣ, ಚುನಾವಣೆ ಮುಗಿದ ನಂತರ 4 ವರ್ಷ 11 ತಿಂಗಳು ಪûಾತೀತವಾಗಿ ಕಾರ್ಯ ಮಾಡಿ ಜನತೆಯ ಕೆಲಸಗಳಿಗೆ ಸ್ಪಂದಿಸಬೇಕಾಗಿದೆ ಎಂದರು.

ಇಂಡಿ ಪಟ್ಟಣದಲ್ಲಿಯ ರಸ್ತೆಗಳನ್ನು ಅಗಲೀಕರಿಸುವಾಗ ಅನೇಕರು ಅಂಗಡಿಗಳನ್ನು ಕಳೆದುಕೊಂಡಿದ್ದರು. ಅವರಿಗೆ ಅನುಕೂಲವಾಗಲೆಂದು ಪುರಸಭೆಗೆ ಆಸ್ತಿಯನ್ನಾಗಿಸಿ ಲೋಕೋಪಯೋಗಿ ಅಧಿಧೀನದಲ್ಲಿರುವ ಗೋಡಾನುಗಳನ್ನು ಹೊಸ ಅವಿಷ್ಕಾರದೊಂದಿಗೆ ಮಳಿಗೆಗಳನ್ನು ನಿರ್ಮಿಸಿ ಮೆಗಾ ಮಾರ್ಕೆಟ್‌ ಮಾಡಲಾಗುವುದು. 72 ಕೋಟಿ ರೂ ವೆಚ್ಚದಲ್ಲಿ ಉಡಚಾಣ- ರೋಡಗಿ ಬ್ರಿàಜ್‌ ಕಾರ್ಯ 2017ರಲ್ಲಿ ಪ್ರಾರಂಭವಾಗಿದ್ದು ಸದ್ಯದಲ್ಲಿಯೇ ಲೋಕಾರ್ಪಣೆಗೆ ಸಿದ್ಧವಾಗಲಿದೆ ಎಂದರು. ವಿಧಾನ ಪರಿಷತ್ತಿನ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಮಾತನಾಡಿ, ಈ ಭಾಗದ ನೀರಾವರಿ ಯೋಜನೆಗಳಿಗಾಗಿ ವಿಧಾನಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಮತ್ತು ವಿಧಾನ ಪರಿಷತ್ತಿನಲ್ಲಿ ನಾನು ಸಾಕಷ್ಟು ಬಾರಿ ಮಾತನಾಡಿದ್ದೇವೆ. ಎಲ್ಲರೂ ಪತೀತವಾಗಿ ಹೋರಾಟ ಮಾಡಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಿ ಕೃಷ್ಣಾ ಕೊಳ್ಳದ ಮೂರನೆಯ ಹಂತದ ಕೆಲಸ ಕಾರ್ಯಗಳನ್ನು ತೀವ್ರ ಗತಿಯಲ್ಲಿ ಮುಗಿಸಿ ರೈತರ ಬಾಳನ್ನು ಹಸನಾಗಿಸಬೇಕಾಗಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಕತ್ನಳ್ಳಿಯ ಶ್ರೀ ಶಿವಯ್ಯ ಸ್ವಾಮೀಜಿ ಮಾತನಾಡಿ, ಆಡದೇ ಮಾಡುವವನು ರೂಢಿಯೊಳಗೆ ಉತ್ತಮನು ಎನ್ನುವ ಹಾಗೆ ಯಶವಂತರಾಯಗೌಡರು ಇಂಡಿ ಮತಕ್ಷೇತ್ರದಲ್ಲಿ 2013ರಿಂದ 2021ರ ವರೆಗೆ 3500 ಕೋಟಿ ರೂ ಅನುದಾನ ತಂದು ಇಂಡಿ ಮತಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ ಎಂದರು.

ಇಂಡಿಯ ಹಿರಿಯ ವೈದ್ಯ ಜಿ.ಎಸ್‌.ಕುಲಕರ್ಣಿ ವಕೀಲರು ಹಾಗೂ ಪುರಸಭೆ ಸದಸ್ಯರು ಶಾಸಕ ಯಶವಂತರಾಯಗೌಡರ ಅವರನ್ನು ಸನ್ಮಾನಿಸಿದರು. ಕಂದಾಯ ಉಪವಿಭಾಗಾಧಿ ಕಾರಿ ರಾಹುಲ್‌ ಶಿಂಧೆ, ಪುರಸಭೆ ಅಧ್ಯಕ್ಷೆ ಶೈಲಜಾ ಪೂಜಾರಿ, ಉಪಾಧ್ಯಕ್ಷ ಇಸ್ಮಾಯಿಲ್‌ ಅರಬ, ತಹಶೀಲ್ದಾರ್‌ ಚಿದಂಬರ ಕುಲಕರ್ಣಿ, ಪುರಸಭೆ ಮುಖ್ಯಾ ಧಿಕಾರಿ ಶಿವರಾಜ ಪೂಜಾರಿ, ಧನರಾಜ ಮುಜಗೊಂಡ, ಸಂಬಾಜಿರಾವ ಮಿಸಾಳೆ, ಕಾಂಗ್ರೆಸ್‌ ಇಂಡಿ ಘಟಕದ ಅಧ್ಯಕ್ಷ ಇಲಿಯಾಸ ಬೋರಾಮಣಿ, ಧನ್ಯಕುಮಾರ ಶಹಾ, ಮುತ್ತು ದೇಸಾಯಿ,ಅನಿಲಗೌಡ ಬಿರಾದಾರ, ಪ್ರಶಾಂತ ಕಾಳೆ, ಹಣಮಂತ ಖಂಡೆಕರ, ಪುರಸಭೆ ಸದಸ್ಯರಾದ ಭೀಮನಗೌಡ ಪಾಟೀಲ, ಅಯೂಬ ನಾಟಿಕಾರ, ಸುಧೀರ ಕರಿಕಟ್ಟಿ, ಜಹಾಂಗೀರ ಸೌದಾಗರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next