Advertisement

ಶಿವರಾಮೇಗೌಡರ ಬಾಯಿ ಬಂದ್‌

01:15 AM Apr 05, 2019 | Team Udayavani |

ಹೇಳಿ, ಕೇಳಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ್ದೇ ಹವಾ. ನಾಯಕರ ಆರೋಪ-ಪ್ರತ್ಯಾರೋಪಗಳು ಇಲ್ಲಿ ಮಾಮೂಲಿ ಎಂಬಂತಾಗಿದೆ. ಈ ಮಧ್ಯೆ, ಮಂಡ್ಯ ಚುನಾವಣಾ ಅಖಾಡದಲ್ಲಿ ಜಾತಿ ವಿಚಾರ ಪ್ರಸ್ತಾಪಿಸಿ, ಆಕ್ರೋಶಕ್ಕೆ ಗುರಿಯಾದ ಸಂಸದ ಶಿವರಾಮೇಗೌಡರಿಗೆ ಬಾಯಿ ಬಂದ್‌ ಮಾಡಿಕೊಳ್ಳುವಂತೆ ವರಿಷ್ಠರು ತಾಕೀತು ಮಾಡಿದ್ದಾರಂತೆ. ಇನ್ಮೆàಲೆ ನೀವು ಪ್ರಚಾರಕ್ಕೆ ಬರದಿದ್ದರೂ ಪರವಾಗಿಲ್ಲ, ವಿವಾದಾತ್ಮಕ ಹೇಳಿಕೆ ನೀಡಿ ನಮ್ಮ ಅಭ್ಯರ್ಥಿಗೆ ಮತ ನಷ್ಟ ಮಾಡಬೇಡಿ ಎಂದು ಖಡಕ್ಕಾಗಿ ಹೇಳಿದ್ದಾರಂತೆ.

Advertisement

ಇದೇ ಕಾರಣಕ್ಕಾಗಿ ಶಿವರಾಮೇಗೌಡರು ಮಂಡ್ಯಕ್ಕಿಂತ ಹೆಚ್ಚಾಗಿ ಟಿವಿಗಳಲ್ಲೇ ಇತ್ತೀಚೆಗೆ ಹೆಚ್ಚು ಮಿಂಚುತ್ತಿದ್ದಾರಂತೆ. ಆದರೂ, ಜೆಡಿಎಸ್‌ ನಾಯಕರಿಗೆ ಇವರು ಮಾಧ್ಯಮಗಳ ಮುಂದೆ ಏನಾದರೂ ಮಾತನಾಡಿ ತಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು ಎಂಬ ಆತಂಕ ಇದೆಯಂತೆ. ಅದಕ್ಕಾಗಿ ಒಬ್ಬ ಕಾರ್ಯಕರ್ತನನ್ನು ಸದಾ ಶಿವರಾಮೇಗೌಡರ ಜತೆಗೆ ಬಿಟ್ಟಿದ್ದಾರಂತೆ. ಇದೇ ವೇಳೆ, ಮಂಡ್ಯದ ಬೇರೆ ಜೆಡಿಎಸ್‌ ನಾಯಕರಿಗೂ ಸುಮಲತಾ ಅಂಬರೀಶ್‌ ವಿರುದ್ಧ ಟೀಕೆ ಮಾಡುವ ಭರದಲ್ಲಿ ಡ್ಯಾಮೇಜ್‌ ಆಗುವ ಹೇಳಿಕೆ ಕೊಡಬೇಡಿ ಎಂದು ಫ‌ರ್ಮಾನು ಹೊರಡಿಸಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next