Advertisement

ಇಂದು ರಾಷ್ಟ್ರಕವಿ, ರಸಋಷಿ ಕುವೆಂಪು ಜನ್ಮ ದಿನ

02:44 PM Dec 29, 2020 | mahesh |

ಇಂದು ರಾಷ್ಟ್ರಕವಿ, ವಿಶ್ವ ಮಾನವ ತಣ್ತೀದ ಹರಿಕಾರ ಕುವೆಂಪು ಅವರ ಜನುಮ ದಿನ. 20ನೇ ಶತಮಾನದಲ್ಲಿ ಅವರು ಬೋಧಿಸಿದ ವಿಶ್ವ ಮಾನ ತಣ್ತೀವನ್ನು ಗೌರವಿಸುವ ಸಲುವಾಗಿ ಪ್ರತೀ ವರ್ಷ ಅವರ ಜನ್ಮ ದಿನವಾದ ಡಿಸೆಂಬರ್‌ 29 ಅನ್ನು ವಿಶ್ವ ಮಾನವ ದಿನ ಎಂದು ಆಚರಿಸಲಾಗುತ್ತದೆ.

Advertisement

ಕನ್ನಡ ಭಾಷೆ ಎಂದಾಗ ಎಲ್ಲ ಭಾಷಿಗರಿಗೂ ನೆನಪಾಗುವುದು ರಸ ಋಷಿ ಕುವೆಂಪು. ಅವರು ರಚಿಸಿರುವ ಕಾವ್ಯಗಳಲ್ಲೂ ಹೆಜ್ಜೆನಿನಂಥ ಸವಿ, ರಸೋತ್ಸಾಹ, ಆಧ್ಯಾತ್ಮದ ಜತೆಗೆ ಮೈಗೂಡಿಸಿಕೊಳ್ಳಬೇಕಾದಂಥ ವೈಚಾರಿಕ ಪ್ರಜ್ಞೆ, ಬೆಟ್ಟದಂಥ ನಿಲುವು. ಇವಿಷ್ಟು ಕುವೆಂಪು ಅವರ ಕಾವ್ಯಗಳಲ್ಲಿ ನಾವು ಪಟ್ಟಿಮಾಡಬಹುದಾದ ಅಸಾಮಾನ್ಯ ಸಂಗತಿಗಳು. ಇಂಥ ಸಾವಿರಾರು ಸತ್ತ್ವಗಳು, ತಣ್ತೀಗಳು ಹುದುಗಿವೆ.

ವಿಶ್ವಮಾನವ ತಣ್ತೀ
ಹುಟ್ಟುವ ಪ್ರತೀ ಮಗುವು ವಿಶ್ವಮಾನ ವನೇ. ಅನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗು ತ್ತದೆ. ಆದರೆ ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಆತ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.

ಪ್ರತಿ ಮಗುವೂ ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು “ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು “ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಹುಟ್ಟುವಾಗ “ವಿಶ್ವಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಜಾತಿ, ಮತ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು “ಬುದ್ಧ’ ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ “ಅನಿಕೇತನ’ರಾಗಬೇಕು ಎಂದವರು ಕುವೆಂಪು ಅವರು.

ಪಂಚ ಮಂತ್ರ: ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯನ್ನು ಅವರು ಪರಿಚಯಿಸಿದ್ದರು. ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ ಎಂದಿದ್ದರು. ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು.

Advertisement

ಕುವೆಂಪು
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ 
ಜನನ:
29 ಡಿಸೆಂಬರ್‌ 1904
ನಿಧನ:
11 ನವೆಂಬರ್‌ 1994
ಪ್ರಶಸ್ತಿಗಳು: ಜ್ಞಾನಪೀಠ ಪುರಸ್ಕಾರ, ಕರ್ನಾಟಕ ರತ್ಮ, ಪದ್ಮ ವಿಭೂಷಣ, ಪದ್ಮ ಭೂಷಣ, ಕನ್ನಡ ಸಾಹಿತ್ಯ ಅಕಾಡೆಮಿ ಪುರಸ್ಕಾರ

ಕುವೆಂಪು ಬರೆದ ಆಧುನಿಕ ಕನ್ನಡ ಮಹಾಕಾವ್ಯ ಶ್ರೀರಾಮಾಯಣ ದರ್ಶನಂ ಕೇವಲ ರಾಮಾಯಣದ ಕತೆಯನ್ನು ಮಾತ್ರ ಓದಿಸುವುದಿಲ್ಲ. ಅದೊಂದು ಅಂತರಂಗದ ಅನುಭೂತಿ. ಪ್ರಕೃತಿ ಆರಾಧಕರಾದ ಕುವೆಂಪು ಅವರು ಕನ್ನಡದ ಶೇಷ್ಠ ಸಾಕ್ಷಿ ಪ್ರಜ್ಞೆಯೂ ಹೌದು. ಕುವೆಂಪು ಅವರ ವಿಶ್ವ ಮಾನವ ಸಂದೇಶಗಳಾದ ಮನುಜ ಪಥ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣ ದೃಷ್ಟಿಯ ತಣ್ತೀಗಳನ್ನು ಇಡೀ ಜಗತ್ತೇ ಮೈಗೂಡಿಸಿ ಕೊಳ್ಳಬಹುದಾಗಿದೆ. ಅವರ ಪ್ರಕೃತಿ ಪ್ರೇಮಕ್ಕೆ ಕುಪ್ಪಳ್ಳಿಯ ಅವರ ಮನೆಯೇ ಒಂದು ಶ್ರೇಷ್ಠ ಉದಾಹರಣೆ.

Advertisement

Udayavani is now on Telegram. Click here to join our channel and stay updated with the latest news.

Next