Advertisement

ಕುಸಿತದ ಭೀತಿಯಲ್ಲಿ ಕುತ್ಯಾರು ಎಸ್‌ಟಿ ಕಾಲನಿ ಕಾಂಕ್ರೀಟ್‌ ರಸ್ತೆ

10:37 PM Jun 14, 2020 | Sriram |

ಶಿರ್ವ: ಕುತ್ಯಾರು ಗ್ರಾ.ಪಂ. ವ್ಯಾಪ್ತಿಯ ಕುತ್ಯಾರು ಎಸ್‌ಟಿ ಕಾಲನಿ- ಕೇಂಜ ಬಗ್ಗತೋಟ ಕಾಂಕ್ರೀಟ್ ‌ರಸ್ತೆ ಬಿರುಕು ಬಿಟ್ಟು ಕುಸಿಯುವ ಭೀತಿಯಲ್ಲಿದೆ. ಈ ರಸ್ತೆಯ ಪಕ್ಕದಲ್ಲಿಯೇ ಬೃಹತ್‌ ಹೊಂಡವೊಂದಿದ್ದು, ಮಳೆಗಾಲದಲ್ಲಿ ಮಣ್ಣು ಸಡಿಲಗೊಂಡಿರುವುದು ಇದಕ್ಕೆ ಕಾರಣ.

Advertisement

ರಸ್ತೆಯ ಪಕ್ಕದಲ್ಲಿಯೇ ಪರಿಶಿಷ್ಟ ಪಂಗಡದ ಹಲವು ಮನೆಗಳಿದ್ದು,ಪರಿಸರದ ಮನೆಯವರು ಅಪಾಯದ ಬಗ್ಗೆ ಮುನ್ನೆಚ್ಚರಿಕೆಯ ಕ್ರಮವಾಗಿ ರಸ್ತೆ ಬದಿ ತಡೆ ಬೇಲಿ ನಿರ್ಮಿಸಿದ್ದಾರೆ.

ರಸ್ತೆ ದುರಸ್ತಿಗೊಳಿಸಿ
ಮುಂಗಾರು ಆರಂಭಗೊಂಡಿದ್ದು ಮಳೆ ನೀರಿನೊಂದಿಗೆ ಮಣ್ಣಿನ ಸವಕಳಿಯಿಂದಾಗಿ ರಸ್ತೆ ಕುಸಿದು ಅಪಾಯ ಎದುರಾಗುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಹೊಂಡ ಮುಚ್ಚಿ ರಸ್ತೆ ದುರಸ್ತಿಗೊಳಿಸಬೇಕಿದೆ.
– ಸಂಪತ್‌ಕುಮಾರ್‌ ಕೇಂಜ, ಮಾಜಿ ಗ್ರಾ.ಪಂ.ಸದಸ್ಯ

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next