Advertisement

ಜಗಳ ಬಿಡಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ತಾಯಿ ಸಾವು : ಇಬ್ಬರ ಬಂಧನ

02:42 PM Jan 26, 2022 | Team Udayavani |

ಕುಷ್ಟಗಿ : ಮಗ, ಸೊಸೆಯ ಮೇಲೆ ಹಲ್ಲೆಯನ್ನು ತಡೆಯಲು ಮುಂದಾದ ಸಂದರ್ಭದಲ್ಲಿ, ತಾಯಿಯನ್ನು ದೂಡಿದ ರಭಸಕ್ಕೆ ಬಿದ್ದು ತೀವ್ರಗಾಯಗೊಂಡು ಆಸ್ಪತ್ರೆ ಸೇರಿದ್ದ ತಾಯಿ ಚಿಕಿತ್ಸೆ ಫಲಿಸದೇ 37 ದಿನಗಳ ಬಳಿಕ ಕೊನೆಯುಸಿರೆಳೆದ ಘಟನೆ ‌ಕಡೇಕೊಪ್ಪ ಗ್ರಾಮದಲ್ಲಿ ನಡೆದಿದೆ.

Advertisement

ಕಳೆದ 12 ನೇ ಡಿಸೆಂಬರ್ ರಂದು ಗ್ರಾಮದ ಲಕ್ಷ್ಮಣ ದುರಗಪ್ಪ ಅಡವಿಬಾವಿ, ಸಂತೋಷ ಅಡವಿಬಾವಿ ಎಂಬ ಸಹೋದರರು, ಕ್ಷುಲ್ಲಕ‌ ಕಾರಣಕ್ಕೆ ಮನೆಯಲ್ಲಿದ್ದ ಹೊಳೆಯಪ್ಪ ತೆಗ್ಗಿನಮನಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದರು. ಅದೇ ವೇಳೆ ಗಂಡನ ಮೇಲೆ ಹಲ್ಲೆ ನಡೆಯುವುದನ್ನು ತಪ್ಪಿಸಲು ಹೋದ ಪತ್ನಿ ಮಲ್ಲಮ್ಮಳಿಗೂ ಹಲ್ಲೆ ನಡೆದಿದೆ. ಈ ವೇಳೆ ತಾಯಿ ನಾಗಮ್ಮ ದುರಗಪ್ಪ ಅಡವಿಬಾವಿ ಬಿಡಿಸಿಕೊಳ್ಳಲು ಮುಂದಾದಾಗ ಲಕ್ಷ್ಮಣ ಹಾಗೂ ಸಂತೋಷ ಇಬ್ಬರು ಸೇರಿ ನಾಗಮ್ಮಳನ್ನು ದೂಡಿದ್ದಾರೆ.

ದೂಡಿದ ರಭಸಕ್ಕೆ ನಾಗಮ್ಮಳಿಗೆ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಸೋಮವಾರ ಜ. 24 ರಂದು ನಾಗಮ್ಮ ಕೊನೆಯುಸಿರೆಳೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ಕುಷ್ಟಗಿ ಠಾಣೆಯಲ್ಲಿ ದಾಖಲಾಗಿದ್ದು. ಆರೋಪಿಗಳಾದ ಲಕ್ಷ್ಮಣ ಹಾಗು ಸಂತೋಷ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next