Advertisement

ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಗೆ ಬೆಂಕಿ : ತಪ್ಪಿದ ಬಾರಿ ದುರಂತ, ಲಕ್ಷಾಂತರ ರೂ ನಷ್ಟ

01:41 PM Mar 10, 2022 | Team Udayavani |

ಕುಷ್ಟಗಿ: ಇಲ್ಲಿನ ಬಸವೇಶ್ವರ ವೃತ್ತದ ಬಳಿ ಹಳೆ ಸ್ಟೇಷನ್ ಎದುರಿಗೆ ಇರುವ ಚಹಾ ದ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

Advertisement

ಮುತ್ತಣ್ಣ ಗೊಂದಿ ಅವರಿಗೆ ಸೇರಿದ ಚಾಯ್ ತಲಾಬ್ ಚಹಾದ ಅಂಗಡಿಗೆ ಇತ್ತೀಚೆಗೆ ವೈಯರಿಂಗ್‌ ದುರಸ್ಥಿ ಮಾಡಿಸಿದ್ದರು. ಆದರೆ ಇಂದು ಬೆಳಗ್ಗೆ ಅಂಗಡಿಯಲ್ಲಿ‌ ಏಕಾಏಕಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ ಇದರಿಂದ ಗಾಬರಿಗೊಂಡ ಅಂಗಡಿ ಮಾಲೀಕ ಕೂಡಲೇ ಇಲೆಕ್ಟ್ರಿಕಲ್ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದವರನ್ನು ಕರೆಯಲು‌ ಹೋಗಿದ್ದಾರೆ, ಅಷ್ಟೋತ್ತಿಗೆ ಬೆಂಕಿಯ ಕಿಡಿಯ ಜ್ವಾಲೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡು ಇಡೀ ಅಂಗಡಿಗೆ ಆವರಿಸಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಅಂಗಡಿಯ ಒಳಗೆ ಮೂರು ತುಂಬಿದ ಗ್ಯಾಸ್ ಸಿಲಿಂಡರ್ ಗಳು ಇರುವುದು ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿದ್ದ ಜನರಲ್ಲಿ ಆತಂಕ ಹೆಚ್ಚಾಯಿತು.

ಕೂಡಲೇ ಅಗ್ನಿಶಾಮಕ ಹಾಗೂ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಬಂದು ಅಲ್ಲಿ ನೆರೆದಿದ್ದ ಜನರನ್ನು ಚದುರಿಸಿದರು. ಆದಾಗ್ಯೂ ಜನ ಮುಗಿಬಿದ್ದು ಮೋಬೈಲ್ ಗಳಲ್ಲಿ ವಿಡಿಯೋ ದೃಶ್ಯೀಕರಣ ಮಾಡುವುದರಲ್ಲೇ ಸಹಾಸ ಪ್ರದರ್ಶಿಸಿಸುತ್ತಿರುವುದು ಕಂಡು ಬಂತು.

ಇದನ್ನೂ ಓದಿ : Results; ಪಟಿಯಾಲಾದಲ್ಲಿ ಮಾಜಿ ಸಿಎಂ ಅಮರೀಂದರ್ ಗೆ ಸೋಲು, AAPಗೆ ಅಭಿನಂದನೆ ಸಲ್ಲಿಸಿದ ಸಿಧು

Advertisement

ಬಳಿಕ ಬಂದ ಅಗ್ನಿ ಶಾಮಕ ಸಿಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿ, ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಕರಕಲಾಗುವ ಹಂತದಲ್ಲಿದ 2 ಲಕ್ಷಕ್ಕೂ ಅಧಿಕ ಹಣವನ್ನು ರಕ್ಷಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next