Advertisement

Kustagi: ಟಿಕೇಟ್ ಕೇಳಿದ್ದು ಒಂದು ಊರಿಗೆ ನಿರ್ವಾಹಕ ಕೊಟ್ಟಿರುವುದು ಇನ್ನೊಂದು ಊರಿಗೆ

10:25 AM Sep 07, 2023 | Team Udayavani |

ಕುಷ್ಟಗಿ: ಶಕ್ತಿ ಯೋಜನೆಯಲ್ಲಿ ಬಸ್ ನಿರ್ವಾಹಕನಿಗೆ ಟಿಕೇಟ್ ಕೇಳಿರುವುದು ಒಂದು ಊರು, ಕೊಟ್ಟಿರುವುದು ಮುಂದಿನ ಊರು…ಕೊಡುತ್ತಿರುವ ಆರೋಪ ಕೇಳಿ ಬಂದಿದೆ. ಇಲ್ಲೊಬ್ಬ ಕುಷ್ಟಗಿ ಘಟಕದ ಬಸ್ ನಿರ್ವಾಹಕ ಶಾಲಾ ಬಾಲಕಿ ಕೇಳಿದ್ದು ತಳವಗೇರಾ, ಟಿಕೇಟ್ ಕೊಟ್ಟಿರುವುದು ಹನುಮಸಾಗರಕ್ಕೆ…ಟಿಕೇಟ್ ಕೇಳಿ ಪಡೆದರೆ ಹೀಗೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಕಳೆದ ಸೆ.6 ರಂದು ಕುಷ್ಟಗಿಯ 6ನೇ ತರಗತಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಕುಷ್ಟಗಿ ಯಿಂದ ತಳವಗೇರಾಕ್ಕೆ 12 ರೂ. ಪಡೆದು ಇಳಿಸಬೇಕಿತ್ತು. ನಿರ್ವಾಹಕ ಮಹಾಶಯ, ಮುಂದಿನ ಊರು ಹನುಮಸಾಗರಕ್ಕೆ 28 ರೂ. ಟಿಕೇಟ್ ನೀಡಿ ತಳವಗೇರಾಕ್ಕೆ ಇಳಿಸಿದ್ದಾನೆ.

ಕುಷ್ಟಗಿಯಿಂದ ಬಸ್ ಹತ್ತಿಸಿಕೊಂಡ ಈ ನಿರ್ವಾಹಕನಿಗೆ ವಿದ್ಯಾರ್ಥಿನಿ ತಂದೆ ಮಂಜುನಾಥ ಕಟ್ಟಿಮನಿ ಅವರು ಆಧಾರ್ ಕಾರ್ಡ ಇಲ್ಲ, ತಿದ್ದುಪಡಿ ಪ್ರಕ್ರಿಯಲ್ಲಿದ್ದು ವಿದ್ಯಾರ್ಥಿನಿಯಿಂದ ಹಣ ಪಡೆದು ತಳವಗೇರಾಕ್ಕೆ ಇಳಿಸಲು ವಿನಂತಿಸಿದ್ದಾರೆ.

ತಳವಗೇರಾಕ್ಕೆ ಇಳಿಸಿರುವುದೇನೋ ಸರಿ. ಆದರೆ ಹನುಮಸಾಗರಕ್ಕೆ 28 ರೂ. ಟಿಕೇಟ್ ಯಾಕೆ ನೀಡಿದ? ಎಂಬುದು ವಿದ್ಯಾರ್ಥಿನಿ ಪೋಷಕ ಮಂಜುನಾಥ ಕಟ್ಟಿಮನಿ ಪ್ರಶ್ನಿಸಿದ್ದಾರೆ. ಈ ರೀತಿಯಾಗಿದ್ದಾರೆ ಪ್ರಯಾಣಿಕರು ದೊಡ್ಡವರಾದವರು ನಿರ್ವಾಹಕನನ್ನು ಪ್ರಶ್ನಿಸುತ್ತಿದ್ದರು. ಪಾಪ 6ನೇ ತರಗತಿ ವಿದ್ಯಾರ್ಥಿನಿ ಆಗಿದ್ದರಿಂದ ಪ್ರಶ್ನಿಸದೇ ಟಿಕೇಟ್ ನಷ್ಟೇ ಮೊತ್ತ ನೀಡಿ ಟಿಕೇಟ್ ಪಡೆದುಕೊಂಡಿದ್ದಾಳೆ. ನನ್ನ ಮಗಳು ತಳವಗೇರಾ ಎಂದು ಬಾಯ್ಬಿಟ್ಟು ಹೇಳಿದರೂ, ನಿರ್ವಾಹಕ ಟಿಕೇಟ್ ಮಾತ್ರ ಹನುಮಸಾಗರಕ್ಕೆ ನೀಡಿದ್ದಾನೆ . ನಿರ್ವಾಹಕನ ಎಡವಟ್ಟಿಗೆ ಪಾಲಕ ಮಂಜುನಾಥ ಕಟ್ಟಿಮನಿ ಅವರು, ಕುಷ್ಟಗಿ ಘಟಕ ವ್ಯವಸ್ಥಾಪಕ ಜಡೇಶ್ ಅವರಿಗೆ ವಿಚಾರಿಸಿದರೆ ಸಮಂಜಸ ಉತ್ತರ ನೀಡದೇ ಹಾರಿಕೆ ಉತ್ತರ ನೀಡಿರುವುದಕ್ಕೆ ಮಂಜುನಾಥ ಕಟ್ಟಿಮನಿ ಸಾರ್ವಜನಿಕ ಬಸ್ ಸೇವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‌Mohan Bhagwat: ಸಮಾಜದಲ್ಲಿ ಅಸಮಾನತೆ ಇರೋವವರೆಗೂ ಮೀಸಲಾತಿ ಮುಂದುವರಿಯಬೇಕು: ಭಾಗವತ್

Advertisement
Advertisement

Udayavani is now on Telegram. Click here to join our channel and stay updated with the latest news.

Next