Advertisement

ಬೆಂಕಿ ಅವಘಡ: 4 ಎಕರೆಗೂ ಅಧಿಕ ತೋಟಗಾರಿಕಾ ಬೆಳೆಗಳು ಬೆಂಕಿಗಾಹುತಿ

07:39 PM Feb 11, 2023 | Team Udayavani |

ಕುಷ್ಟಗಿ: ತಾಲೂಕಿನ ಎಂ. ಬಸಾಪೂರ ಗ್ರಾಮದ ಹೊರವಲಯದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ 4 ಎಕರೆಗೂ ಅಧಿಕ ತೋಟದ ಬೆಳೆಗೆ ಬೆಂಕಿಗೆ ಆಹುತಿಯಾಗಿದೆ.

Advertisement

ಇಲಕಲ್ ಮೂಲದ ಚನ್ನಬಸಪ್ಪ ಲೆಕ್ಕಿಹಾಳ ಹಾಗೂ ಮನೋಹರ ಕರವಾ ಎಂಬುವರ ಮಾಲೀಕತ್ವದ ತೋಟಕ್ಕೆ ಮದ್ಯಾಹ್ನ ವೇಳೆ ಬೆಂಕಿ ವ್ಯಾಪಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ವಾಹನ ಆಗಮಿಸಿ ಮುಂದಾಗುವ ಅನಾಹುತ ತಹಬಂದಿಗೆ ತಂದಿದೆ.ಆದಾಗ್ಯೂ ಶ್ರೀಗಂಧ, ಹೆಬ್ಬೇವು, ಮಹಾಗನಿ, ಸಪೋಟಾ. ಮಾವು ಬೆಳೆಯಿದ್ದ ತೋಟದಲ್ಲಿ ಬೇಲಿಗುಂಟ ಬೆಂಕಿ ವ್ಯಾಪಿಸಿದ್ದು, ನಂತರ ತೋಟದ ಬೆಳೆಗಳಿಗೂ ವ್ಯಾಪಿಸಿದೆ.

12 ವರ್ಷಗಳಿಂದ ಜೋಪಾನ ಮಾಡಿದ್ದ ತೋಟಗಾರಿಕೆ ಗಿಡಗಳು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದ್ದು, ಅಂದಾಜು 15ರಿಂದ 20 ಲಕ್ಷ ಹಾನಿ ಸಂಭವಿಸಿದೆ. ಕಟಾವು ಹಂತದ ಸಪೋಟ ಹಾಗೂ ಮಿಡಿ ಮಾವಿನ ಕಾಯಿಗಳು ಬೆಂಕಿಗೆ ಆಹುತಿಯಾಗಿವೆ.

ಇದನ್ನೂ ಓದಿ: ಗಂಗಾವತಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ನಾಲ್ಕು ಜೋಡಿ ದಂಪತಿಗಳು ಮತ್ತೆ ಒಂದಾದರು

Advertisement

Udayavani is now on Telegram. Click here to join our channel and stay updated with the latest news.

Next