Advertisement

Kushtagi ಬೈಕ್ ನೊಳಗೆ ನುಸುಳಿ ಆತಂಕಕ್ಕೆ ಕಾರಣವಾದ ನಾಗರಹಾವು!

06:17 PM Oct 07, 2023 | Team Udayavani |

ಕುಷ್ಟಗಿ: ನಿಂತಿದ್ದ ಬೈಕ್ ನ ಒಳ‌ಗೆ ನುಸುಳಿ ಕೆಲ ಕಾಲ ಆತಂಕಕ್ಕೆ ಕಾರಣವಾಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ರಕ್ಷಿಸಿದ ಘಟನೆ ಕುಷ್ಟಗಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿ ಪಿಸಿಎಚ್ ಪ್ಯಾಲೇಸ್ ಬಳಿ ನಡೆದಿದೆ.

Advertisement

ಕೊಪ್ಪಳ ರಸ್ತೆಯಲ್ಲಿ ಜಮೀನು ಸರ್ವೆ ಕೆಲಸಕ್ಕೆ ಬಂದವರು ಬೈಕ್ ನಿಲ್ಲಿಸಿದ್ದರು. ಸರ್ವೆ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ನಾಗರಹಾವು ಅಲ್ಲಿಯೇ ಗಿಡದ ನೆರಳಿಗೆ ನಿಂತಿದ್ದ ಜಮೀನು ಮಾಲಕ ರಾಜೇಸಾಬ್ ಗಂಗನಾಳ ಅವರ ಬೈಕ್ ನ ಸೀಟ್ ಅಡಿಯಲ್ಲಿ ಹೋಗುತ್ತಿರುವುದನ್ನು ಗಮನಿಸಿದ್ದಾರೆ.

ನಾಗರಹಾವು ಬೈಕ್ ಸೀಟ್ ಅಡಿಯಲ್ಲಿ ನುಸುಳಿಕೊಂಡಿರುವುದನ್ನು ಗಮನಿಸದೇ ಇದ್ದರೆ ಬೈಕ್ ಸವಾರನಿಗೆ ಕಚ್ಚುವ ಸಾಧ್ಯತೆಗಳಿದ್ದವು. ಬೈಕ್ ನಲ್ಲಿ ರಕ್ಷಣೆ ಪಡೆದಿದ್ದ ಬುಸುಗುಡುತ್ತಿದ್ದ ಹಾವನ್ನು ಹೊರಕ್ಕೆ ಬರುವಂತೆ ಮಾಡುವ ಧೈರ್ಯವನ್ನು ಯಾರೂ ಮಾಡಲಿಲ್ಲ. ಕೂಡಲೇ ಉರಗ ಸ್ನೇಹಿ ಸ್ನೇಕ್ ಚಾಂದ್ ಪಾಷಾ ಅವರನ್ನು ಕರೆಸಿ ಬೈಕ್ ಸೀಟ್ ಅಡಿಯಲ್ಲಿ ಐದು ಅಡಿ ಉದ್ದದ ಹಾವನ್ನು ಹೊರಕ್ಕೆ ತೆಗೆಯಲಾಯಿತು. ಆತಂಕಗೊಂಡಿದ್ದವರು ನಿಟ್ಟುಸಿರು ಬಿಡುವಂತಾಯಿತು. ಈ‌ ಕಾರ್ಯಾಚರಣೆಗೆ ಎಎಸ್ ಐ ತಾಯಪ್ಪ, ಲಕ್ಷ್ಮಣ ಕಟ್ಟಿಹೊಲ, ಮಂಜುನಾಥ ಉಪ್ಪಾರ ಮೊದಲಾದವರು ಸಾಕ್ಷಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next