Advertisement

Kushtagi News : ಧಗ ಧಗನೇ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು

06:24 PM Apr 06, 2023 | Team Udayavani |

ಕುಷ್ಟಗಿ: ಚಲಿಸುತ್ತಿದ್ದ ಕಾರಿನ ಬಾನೆಟ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ‌ ಕಾಣಿಸಿಕೊಂಡು ಕಾರು ಧಗ ಧಗನೇ ಹೊತ್ತಿ ಉರಿದ ಘಟನೆ‌ ಕುಷ್ಟಗಿಯಲ್ಲಿ ಸಂಭವಿಸಿದೆ.

Advertisement

ಕಾರು ವಿಜಯಪುರದಿಂದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಬೆಂಗಳೂರಿಗೆ ಕುಷ್ಟಗಿ ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ ಕುಷ್ಟಗಿ ಹೊರವಲಯದಲ್ಲಿ ಈ ಘಟನೆ ಸಂಭವಿದೆ. ಕಾರಿನಲ್ಲಿ ಲಕ್ಕಿಂಟಿವಾರಿ‌ ರಾಮರಡ್ಡಿ ಇವರ ಸ್ನೇಹಿತ ವಿಶ್ವನಾಥರಡ್ಡಿ ಕೊಂಡಪುರ ಸಂಚರಿಸುತ್ತಿದ್ದರು.

ಕಾರಿನ ಇಂಜಿನ್ ತಾಂತ್ರಿಕ ದೋಷವೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಕಾರಿನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ಹೊರಗೆ ಬಂದಿದ್ದು ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಕಾರು ಧಗ ಧಗನೇ ಬೆಂಕಿ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಒಂದೂವರೆ ಲಕ್ಷ ರೂ. ದಾಖಲಾತಿಗಳು ಸುಟ್ಟು ಕರಕಲಾಗಿದೆ.

ಈ ಕಾರು ಕೋಲಾರ ಜಿಲ್ಲೆಯ ವೇಮಗಲ್ ಗ್ರಾಮದ ಲಕ್ಕಿಂಟಿವಾರಿ ರಾಮ್ ರಡ್ಡಿ, ನಾರಾಯಣ ರಡ್ಡಿ ಅವರಿಗೆ ಸೇರಿದ ಕಾರು ಇದಾಗಿದೆ. ಮೂರು ತಿಂಗಳ‌ ಹಿಂದೆ ಪರಿಚಯಿಸ್ಥರಾದ ಅನಿಲಕುಮಾರ ಅವರಿಂದ ಈ ಕಾರು ಖರೀಧಿಸಿದ್ದರು. ಕಾರಿಗೆ ಸಂಭಂದಿಸಿದ ಆರ್ ಸಿ. ಯನ್ನು ಯಲಹಂಕ ಆರ್ ಟಿಓ ಕಚೇರಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಲಕ್ಕಿಂಟಿವಾರಿ ರಾಮರಡ್ಡಿ ತಿಳಿಸಿದ್ದಾರೆ. ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next