Advertisement

ಕುಷ್ಟಗಿ: ಚುನಾವಣೆ; ದಾಖಲೆ ರಹಿತ 2.50 ಲಕ್ಷ ರೂ ನಗದು ಪತ್ತೆ, ಸ್ಕಾರ್ಪಿಯೋ ವಶ

10:47 AM Mar 26, 2023 | Team Udayavani |

ಕುಷ್ಟಗಿ: ಮಹಾರಾಷ್ಟ್ರ ಅಹ್ಮದ ನಗರದಿಂದ ಕೋಲಾರ ಜಿಲ್ಲೆಗೆ ಸಂಚರಿಸುತ್ತಿದ್ದ ವಾಹನವನ್ನು ಶನಿವಾರ ಸಂಜೆ ಪೊಲೀಸರು ತಡೆದು ಪರಿಶೀಲಿಸಿ, ದಾಖಲೆ ರಹಿತ 2.50 ಲಕ್ಷ ರೂ ನಗದು ಪತ್ತೆಯಾದ ಪ್ರಕರಣ ಕ್ಯಾದಿಗುಪ್ಪ ಹೆದ್ದಾರಿ ಚೆಕ್ ಪೋಸ್ಟ್ ನಲ್ಲಿ ಬೆಳಕಿಗೆ ಬಂದಿದೆ.

Advertisement

ಮಹೇಂದ್ರ ಸ್ಕಾರ್ಪಿಯೋ ವಾಹನದಲ್ಲಿ 7 ಜನರು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹೆದ್ದಾರಿ ಚೆಕ್ ಪೊಸ್ಟ್ ನಲ್ಲಿ ಪೊಲೀಸರು ತಡೆದು ವಾಹನದಲ್ಲಿದ್ದವರ ವಿಚಾರಣೆ ನಡೆಸಿದ್ದಾರೆ.

ಆಗ ಅನುಮಾನಗೊಂಡು ಪರಿಶೀಲಿಸಿದಾಗ ಸೀಟಿನ ಅಡಿಯಲ್ಲಿ 2.50 ಲಕ್ಷ ರೂ. ಹಣದ ಚೀಲ ಪತ್ತೆಯಾಗಿದೆ. ಈ ಹಣದ ಬಗ್ಗೆ ದಾಖಲಾತಿ ನೀಡದಿರುವುದು, ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡದೇ ಇರುವುದು 7 ಜನ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹೇಂದ್ರ ಸ್ಕಾರ್ಪಿಯೋ ವಶಕ್ಕೆ ತೆಗೆದುಕೊಂಡಿದ್ದಾರೆ.

ಸುದಾಮ್ ಪಂಡಿತ್, ಗಣೇಶ ಗೋಡ್ಕೆ, ಸತೀಶ್ ತಾಂಬೆ, ಭಾಗದತ್ತರಾವ್ ಡೋಬಿ,ಶರದ್ ಇರ್ಕಾರ್, ಮಾರುತಿ ಗೋಡ್ಕೆ, ಗ್ಯಾನೇಶ್ವರ ಡೋಭಿ ಈ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಆರೋಪಿಗಳು ಮಹಾರಾಷ್ಟ್ರ ರಾಜ್ಯದ ಅಹ್ಮದ‌ನಗರ ಜಿಲ್ಲೆಯವರಾಗಿದ್ದು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಗೆ ವ್ಯಾಪಾರಕ್ಕೆ ಹೊರಟಿದ್ದರು ಎಂದು ತಿಳಿಸಿದ್ದು ಯಾವ ವ್ಯಾಪಾರ ಎಂಬುದು ಸ್ಪಷ್ಟಪಡಿಸಿಲ್ಲ. ಈ ಆರೋಪಿಗಳು ಸೀಟಿನ ಅಡಿಯಲ್ಲಿ ಯಾಕೆ ಇಟ್ಟಿದ್ದರು ಅನುಮಾನಕ್ಕೆ ಎಡೆಮಾಡಿದೆ.

Advertisement

ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next