Advertisement

ಜಾರಕಿಹೊಳಿಗೆ ಬಿಜೆಪಿ ಸಂಸ್ಕೃತಿ ಒಗ್ಗುತ್ತಿಲ್ಲ: ಬಯ್ನಾಪೂರ

06:28 PM Jun 27, 2021 | Team Udayavani |

ಕೊಪ್ಪಳ: ಮಾಜಿ ಸಚಿವ ರಮೇಶ ಜಾರಕಿಹೊಳೆಗೆ ಬಿಜೆಪಿಯ ಗರ್ಭಗುಡಿ ಸಂಸ್ಕೃತಿಯು ಒಗ್ಗುತ್ತಿಲ್ಲ. ಅವರು ಮುಂಬೈಗೆ ಹೋಗಿರುವುದನ್ನು ನೋಡಿದರೆ ಅವರು ಬಿಜೆಪಿ ತೊರೆಯುವ ಸಾಧ್ಯತೆ ಹೆಚ್ಚಿದೆ ಎಂದೆನಿಸುತ್ತೆ ಎಂದು ಕುಷ್ಟಗಿ ಶಾಸಕ ಅಮರೆಗೌಡ ಬಯ್ನಾಪೂರ ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ಯಾವ ನಾಯಕರು ಯಾವ ಸಂದರ್ಭದಲ್ಲಿ ಯಾವ ಪಕ್ಷ ಬದಲಿಸುತ್ತಾರೋ ಎನ್ನುವುದೇ ಗೊತ್ತಾಗುವುದಿಲ್ಲ. ಜಾರಕಿಹೊಳೆ ಟೀಮ್‌ ಮುಂಬೈಗೆ ಹೋಗಿ ಅಲ್ಲಿಂದ ಬಿಜೆಪಿ ಸೇರಿದರು. ಈಗ ಅವರೆಲ್ಲರೂ ಮತ್ತೆ ಪಕ್ಷ ಬದಲಿಸುವ ಸಾಧ್ಯತೆಯಿದೆ. ಅವರು ಮತ್ತೆ ಕಾಂಗ್ರೆಸ್‌ಗೆ ಬರಬಹುದು. ಇಲ್ಲವೇ ಜೆಡಿಎಸ್‌ ಪಕ್ಷ ಸೇರ್ಪಡೆಯಾಗಬಹುದು ಎಂದರಲ್ಲದೇ, ರಾಜಕಾರಣ ನಿಂತ ನೀರಿಲ್ಲ. ಯಾರೂ ಎತ್ತ ಹರಿಯುತ್ತಾರೋ ಗೊತ್ತಾಗಲ್ಲ. ರಮೇಶ ಜಾರಕೀಹೊಳಿ ಅವರು ಯಡಿಯೂರಪ್ಪ ಅವರನ್ನು ಸಿಎಂ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಮತ್ತೆ ಬಿಎಸ್‌ವೈ ಅವರನ್ನು ಜಾರಕಿಹೊಳಿ ಕೆಳಗಿಳಿಸುತ್ತಾರೆ ಎಂದೆನಿಸಲ್ಲ ಎಂದರು.

ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಸಿಎಂ ಸ್ಥಾನದ ಬಗ್ಗೆಯೂ ಚರ್ಚೆ ನಡೆದಿಲ್ಲ. ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನದ ಅರ್ಹತೆ ಇರುವವರು ತುಂಬಾ ಜನ ಇದ್ದಾರೆ. ನಮ್ಮ ಪಕ್ಷ ಇನ್ನೂ ಅ ಧಿಕಾರಕ್ಕೆ ಬರಬೇಕು. ಆಗ ಸಿಎಂ ಯಾರೆಂದು ಪಕ್ಷದ ಹೈಕಮಾಂಡ್‌ ನಿರ್ಧಾರ ಮಾಡಲಿದೆ. ಈಗಲೇ ಅಂತಹ ಚರ್ಚೆ ನಡೆದಿಲ್ಲ. ಕೆಲವು ಶಾಸಕರು ಅಭಿಮಾನದಿಂದ ಹಾಗೆಲ್ಲ ಹೇಳುತ್ತಿರಬಹುದು. ಅದೇ ದೊಡ್ಡ ಅಪರಾಧವಲ್ಲ. ಇದರಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಮ್ಮಲ್ಲಿನ ಇಂತಹ ಚರ್ಚೆಗಳೇ ಬಿಜೆಪಿಗೆ ಆಹಾರವಾಗಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next