Advertisement

Kushtagi: ವಿಷ ಅಣಬೆ ಸೇವಿಸಿ ಹಲವರು ಅಸ್ವಸ್ಥ

01:19 PM Aug 24, 2024 | Team Udayavani |

ಕುಷ್ಟಗಿ: ಹುಚ್ಚಾಳಂಬಿ (ವಿಷ ಅಣಬೆ) ಸೇವಿಸಿ ತಾಲೂಕಿನ ಎಂ. ಗುಡದೂರು ಗ್ರಾಮದ ಹಲವಾರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಪ್ರಕರಣ ಆ.23ರ ಶುಕ್ರವಾರ ನಡೆದಿದೆ.

Advertisement

ಎಂ. ಗುಡದೂರು ಗ್ರಾಮದ ಅಕ್ಕಮ್ಮ ಔತೆದಾರ, ಸೋಮವ್ವ ದೋಟಿಹಾಳ,  ಗಂಗವ್ವ ಕುರಿ,  ಶಿಲ್ಪಾ ಜೌತೆದಾರ, ಶಿವಮ್ಮ ಗುಂಡಿಹಿಂದಲ್ ಮುಂತಾದವರು ಹುಚ್ಚಳಂಬಿ ಸೇವಿಸಿ ಅಸ್ವಸ್ಥರಾದ ಕೃಷಿ ಕಾರ್ಮಿಕರು..

ಶಾಖಾಪೂರು ಗ್ರಾಮದ ಮುತ್ತನಗೌಡ ಪೊಲೀಸ್‌ ಪಾಟೀಲ್ ಅವರ ಜಮೀನಿನಲ್ಲಿ ಕೂಲಿ ಕೆಲಸ‌ ಮಾಡುವಾಗ ಹುಚ್ಚಾಳಂಬಿ ಕಂಡು ಬಂದಿದ್ದು, ಅದನ್ನು‌ ಸೇವಿಸಿದಾಗ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೂಡಲೇ ಅವರುಗಳನ್ನು ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next