Advertisement

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

03:52 PM Apr 19, 2024 | Team Udayavani |

ಕುಷ್ಟಗಿ: ಇಲ್ಲಿನ ರಸ್ತೆ ವಿಭಜಕದ ವಿದ್ಯುತ್‌ ದೀಪದ ಕಂಬಗಳಿಗೆ ಕ್ರೇನ್ ಲ್ಯಾಡರ್ ಮೇಲೆ‌ ನಿಂತು ಎಲ್ಇಡಿ ಬಲ್ಬ್ ಅಳವಡಿಸುವ ವೇಳೆ ಪುರಸಭೆ ಸಿಬ್ಬಂದಿ ಗಾಯಗೊಂಡಿರುವ ಘಟನೆ ನಡೆದಿದೆ.

Advertisement

ಪಟ್ಟಣದ ಮುಖ್ಯ ರಸ್ತೆಯ ವಿಭಜಕದಲ್ಲಿ ವಿದ್ದುದ್ದೀಪದ ಕಂಬಗಳಿಗೆ ಪುರಸಭೆ ಸಿಬ್ಬಂದಿ ನಾಗರಾಜ್ ಚಲವಾದಿ ಕ್ರೇನ್ ಲ್ಯಾಡರ್ ಮೇಲೆ ನಿಂತು ಎಲ್ಇಡಿ ಬಲ್ಬ್ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು. ಇನ್ನೇನು ಕೆಲಸದ ಅಂತಿಮದಲ್ಲಿ‌ ಕ್ರೇನ್ ನ ಲ್ಯಾಡರ್ ಬೆಲ್ಟ್ ಕೊಂಡಿ ಜರಿದು ಕಳಚಿದಾಗ 20 ಅಡಿಯಿಂದ ಕೆಳಗೆ ಬಿದ್ದು, ತೀವ್ರ ಗಾಯಗೊಂಡಿದ್ದು, ಕಾಲು‌ ಮುರಿತದ ತೀವ್ರ ಸ್ವರೂಪದ ಗಾಯವಾಗಿದೆ.

ಕೂಡಲೇ ಅವರನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಇಲಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next