Advertisement

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

12:51 PM May 01, 2024 | Team Udayavani |

ಕುಷ್ಟಗಿ: ಕಳೆದ ಮಂಗಳವಾರದಿಂದ ಕಾಣೆಯಾಗಿದ್ದ ಪುರಸಭೆ ನೌಕರ ಶಿವಮೂರ್ತೆಪ್ಪ ಕಟ್ಟಿಮನಿ ಗಜೇಂದ್ರಗಡ ತಾಲೂಕಿನ ರಾಜೂರು ಬಳಿ ಪತ್ತೆಯಾಗಿದ್ದಾರೆ.

Advertisement

ಅವರು ಮಂಗಳವಾರ ಮಗಳ ಊರು ಗಜೇಂದ್ರಗಡಕ್ಕೆ ಹೋಗಿದ್ದರು. ಅಲ್ಲಿ ಮಗಳ ಮನೆಗೆ ದಾರಿ ಸಿಗದೇ ಇನ್ನೊಬ್ಬ ಸಂಬಂಧಿಕರ ಊರು ರಾಜೂರುಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ವೇಳೆ ಬುಧವಾರ ಅಪರಾಹ್ನ ಸಿಕ್ಕಿದ್ದಾರೆ. ಶಿವಮೂರ್ತೆಪ್ಪ ಕಟ್ಟಿಮನಿ ಸಿಕ್ಕಿರುವುದು ಮನೆಯಲ್ಲಿ ಆತಂಕ ಇನ್ನಿಲ್ಲವಾಗಿ ಸಂಭ್ರಮ ಮನೆ ಮಾಡಿದೆ.

ನಮ್ಮ ದೊಡ್ಡಪ್ಪ ಶಿವಮೂರ್ತೆಪ್ಪ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಊರಿಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ಮಂಜುನಾಥ ಕಟ್ಟಿಮನಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next